ಬೈಂದೂರು ಉತ್ಸವ ಸಮಿತಿ ಹಾಗೂ ಸಮಷ್ಟಿ ಪ್ರತಿಷ್ಠಾನ, ರೈತೋತ್ಸಾನ ಬಳಗ, ರೋಟರಿ ಹಾಗೂ ಲಯನ್ ಕ್ಲಬ್ ಗಳ ಆಶ್ರಯದಲ್ಲಿ ಮೂರು ದಿನಗಳ ಹಲಸು ಮತ್ತು ಕೃಷಿಮೇಳ ನಡೆಯಿತು.
ಬೈಂದೂರಿನ ಯಡ್ತರೆಯಲ್ಲಿರುವ ಬಂಟರ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಬೈಂದೂರಿನ ಇತಿಹಾಸದಲ್ಲಿ ಪ್ರಥಮವಾಗಿ ಹಮ್ಮಿಕೊಂಡಿದ್ದ ಈ ಮೂರು ದಿನಗಳ ಮೇಳದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಲಸು ಬೆಳೆಗಾರರು, ಹಲಸಿನ ಮೌಲ್ಯವರ್ಧನೆ ಮಾಡುವ ವಿವಿಧ ಖಾದ್ಯಗಳ ಮಳಿಗೆಗಳನ್ನು ಸ್ಥಾಪಿಸಲಾಗಿತ್ತು.
ಹಲಸಿನ ಹೋಳಿಗೆ, ಹಪ್ಪಳ, ಸಂಡಿಗೆ, ಮುಳುಕ, ಕಬಾಬ್, ಮಂಚೂರಿ, ಹಲಸಿನ ಕಡುಬು, ಐಸ್ ಕ್ರೀಮ್ ಮುಂತಾದ ಹಲವು ಹಲಸಿನ ಉತ್ಪನ್ನಗಳು ಹಾಗೂ ವಿವಿಧ ತಳಿಯ ಹಣ್ಣಿನ ಗಿಡ ಮತ್ತು ಹೂವಿನ ಗಿಡಗಳ ಮಳಿಗೆಗಳು ಇದ್ದವು. ಅದರೊಂದಿಗೆ ಕೈಮಗ್ಗದ ಸೀರೆಗಳು, ಕರಕುಶಲ ವಸ್ತುಗಳು, ಗ್ರಾಮೀಣ ಭಾಗದ ತಿಂಡಿತಿನಿಸುಗಳ ಮಳಿಗೆಗಳು ಜನರ ಮನ ಸೆಳೆದವು.
ಗ್ರಾಮೀಣ ಪ್ರದೇಶವನ್ನು ಹೊಂದಿರುವ ಬೈಂದೂರಿನಲ್ಲಿ ಪ್ರಥಮ ಬಾರಿಗೆ ಈ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು. ಈ ಮೂರು ದಿನಗಳ ಹಲಸು ಮೇಳಕ್ಕೆ ಉದ್ಯಮಿ ಗೋಕುಲ್ ಶೆಟ್ಟಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ” ಹಲಸು ಮೇಳದಲ್ಲಿ ಗುಣಮಟ್ಟದ ಹಣ್ಣುಗಳು ಮತ್ತು ಖಾದ್ಯಗಳು ಬಂದಿರುವುದು ಸಂತಸ ತಂದಿದೆ. ಜನರು ಸಾಮರಸ್ಯದಿಂದ ಒಟ್ಟಾಗಿ ಬದುಕಲು ಇಂತಹ ಮೇಳಗಳು ಸಹಕಾರಿ ಎಂದರು.
ತುಮಕೂರಿನ ಗುಬ್ಬಿ ತಾಲುಕಿನ ಹಲಸು ಬೆಳೆಗಾರ ನರಸಿಂಹ ಮೂರ್ತಿ ಮಾತನಾಡಿ, ” ನನ್ನಲ್ಲಿ ಒಟ್ಟು 200 ಹಲಸಿನ ಮರಗಳಿದ್ದು, ನಂದು ಹಲಸು, ಚಂದ್ರ ಹಲಸು, ನಾಗ ಹಲಸು ಮುಂತಾದ ವಿವಿಧ ತಳಿಯ ಹಲಸುಗಳನ್ನು ಮಾರಾಟ ಮಾಡಲು ತಂದಿದ್ದೇನೆ. ಉತ್ತಮ ಸ್ಪಂದನೆ ಇದೆ. ಕಳೆದ 9 ವರ್ಷಗಳಿಂದ ಹಲಸು ಮೇಳಗಳಲ್ಲಿ ಭಾಗವಹಿಸುತ್ತಿದ್ದೇನೆ. ಇಂತಹ ಮೇಳದಿಂದ ಯಾವುದೇ ಮಧ್ಯವರ್ತಿಗಳಿ ಇಲ್ಲದೇ ಹಲಸುಗಳಿಗೆ ಉತ್ತಮ ದರ ಸಿಗುತ್ತಿದ್ದು, ಉತ್ತಮ ಮಾರುಕಟ್ಟೆ ದೊರಕಿದೆ. ಗ್ರಾಮೀಣ ಮಟ್ಟದಲ್ಲೂ ಇಂತಹ ಮೇಳಗಳನ್ನು ಆಯೋಜಿಸಬೇಕು ಎಂದರು.
ಕೃಷಿಕ ಗೋಪಾಲ ನಾಯ್ಕ ಮಾತನಾಡಿ, ಇಂತಹ ಮೇಳಗಳು ಗ್ರಾಹಕರು ಹಾಗೂ ಕೃಷಿಕರಿಗೆ ಸಹಕಾರಿಯಾಗಿದೆ. ಒಂದೇ ಸೂರಿನಡಿ ವಿವಿಧ ರೀತಿಯ ಹಣ್ಣಿನ ಹಾಗೂ ಹೂವಿನ ಗಿಡಗಳ ಬಗ್ಗೆ ಮಾಹಿತಿ ದೊರಕಿದ್ದು, ಕೆಲಸದ ಒತ್ತಡಗಳ ಕೃಷಿಯ ಬಗ್ಗೆ ಮಾಹಿತಿ ಹಾಗೂ ಆಸಕ್ತಿ ಹೊಂದಲು ಇಂತಹ ಮೇಳಗಳು ಸಹಕಾರಿಯಾಗಿದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಬೈಂದೂರು ಉತ್ಸವ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ, ಮಾಜಿ ಜಿಪಂ ಅಧ್ಯಕ್ಷ ರಾಜು ಪೂಜಾರಿ, ಸಂಚಾಲಕ ಶ್ರೀಧರ ಖಾರ್ವಿ, ಪುದೀಪ ಶೆಟ್ಟಿ, ರೋಟರಿ ಹಾಗು ಲಯನ ಕಟ್ಟಿನ ಪದಾಧಿಕಾರಿಗಳು
ಉಪಸ್ಥಿತರಿದ್ದರು.