ಸ್ವಪಕ್ಷದ ವಿರುದ್ಧವೇ ಮತ್ತೊಮ್ಮೆ ಮಾಜಿ ಸಚಿವ ಜಿಟಿ ದೇವೇಗೌಡ ಭಿನ್ನರಾಗ ಹಾಡಿದ್ದಾರೆ. ಅವರವರ ಅನುಕೂಲಕ್ಕೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಆದರೆ ಅವರೇ ಬೇರೆ ಇವರೇ ಬೇರೆ ಅಂತಾ ಏನೇನೋ ಮಾಡಿಕೊಂಡು ಓಡಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಜಿ.ಟಿ. ದೇವೇಗೌಡ, ಸ್ವಪಕ್ಷದ ದೋಸ್ತಿ ನಡೆಯನ್ನೇ ಬಹಿರಂಗವಾಗಿ ಟೀಕಿಸಿದ್ದಾರೆ. ಹಿಂದೆಲ್ಲಾ ಪಕ್ಷಗಳನ್ನ ಕಟ್ಟಿ, ಯೋಜನೆಗಳನ್ನು ರೂಪಿಸಿ ಅಧಿಕಾರಕ್ಕೆ ತರಲಾಗುತ್ತಿತ್ತು. ಆದರೀಗ ಆ ಪರಿಸ್ಥಿತಿ ಇಲ್ಲ. ರಾಜ್ಯದಲ್ಲಿ ಆಡಳಿತ ನಡೆಸುವ ಸರ್ಕಾರಗಳ ಆಡಳಿತ ವಿರೋಧಿ ನೀತಿಯೇ ಈಗ ಇನ್ನೊಂದು ಪಕ್ಷಕ್ಕೆ ಅಧಿಕಾರದ ದಾರಿ ಮಾಡಿಕೊಡ್ತಿದೆ.
ಹಾಗಂತಾ ಮೊದಲಿನಂತೆ ಈಗಿನ ನಾಯಕರಲ್ಲಿ ತ್ಯಾಗ, ನಿಷ್ಠೆಯೂ ಇಲ್ಲದಾಗಿದೆ ಅಂತಾ ಹೇಳೋ ಮೂಲಕ ಮತ್ತೊಮ್ಮೆ ಕುಮಾರಸ್ವಾಮಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ದೋಸ್ತಿ ಆಡಳಿತದಲ್ಲಿ ಹೊಂದಾಣಿಕೆ ಇರಬೇಕು. ಆದ್ರೆ ನಮ್ಮಲ್ಲಿ ಅದಿಲ್ಲ. ಉತ್ತಮ ಬಾಂಧವ್ಯಕ್ಕೆ ಸಮನ್ವಯ ಸಮಿತಿ ಇರಬೇಕು ಅದೂ ಇಲ್ಲಿಲ್ಲ ಅಂತಾ ಬಿಜೆಪಿ ಜೊತೆಗಿನ ಜೆಡಿಎಸ್ ಮೈತ್ರಿಯನ್ನು ಜಿಟಿಡಿ ಟೀಕಿಸಿದ್ದಾರೆ.