ಬೆಂಗಳೂರು: ರಾಜ್ಯ ಬಿಜೆಪಿಗೆ ನೂತನ ಸಾರಥಿಯ ಆಯ್ಕೆ ಬಹುತೇಕ ಅಂತ್ಯವಾಗಿದೆ. ರಾಜ್ಯ ಬಿಜೆಪಿ ಘಟಕಕ್ಕೆ ಬಿ.ವೈ. ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರಾಗಿ ಮುಂದುವರಿಸುವುದು ಬಹುತೇಕ ಖಚಿತವಾಗಿದೆ ಎಂಬ ಮಾಹಿತಿ ಕರ್ನಾಟಕ ನ್ಯೂಸ್ ಬೀಟ್ ಗೆ ಲಭ್ಯವಾಗಿದೆ.
ಈಗಾಗಲೇ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಬಿ.ವೈ. ವಿಜಯೇಂದ್ರ ಇದ್ದು, ಅವರನ್ನೇ ಮುಂದುವರೆಸಲು ವರಿಷ್ಠರು ತೀರ್ಮಾನಿಸಿದ್ದಾರೆ. ಬಿ.ವೈ.ವಿಜಯೇಂದ್ರರನ್ನೇ ಮರು ಆಯ್ಕೆ ಮಾಡಲು ಹೈಕಮಾಂಡ್ ನಾಯಕರು 5 ಕಾರಣಗಳನ್ನು ನೀಡಿದ್ದಾರೆ.
ಹಾಗಾದ್ರೆ, ಏನದು 5 ಪ್ರಮುಖ ಕಾರಣಗಳು?
- ಕಳೆದೊಂದು ವರ್ಷದಿಂದ ವಿಜಯೇಂದ್ರ ಹೋರಾಟದ ಹಾದಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ನಿಭಾಯಿಸಿದ್ದಾರೆ.
- ಮುಡಾ ಹಾಗೂ ವಾಲ್ಮೀಕಿ ಹೋರಾಟದಲ್ಲಿ ತೊಡಗಿಸಿಕೊಂಡು ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸಿದ್ದಾರೆ.
- ಇನ್ನು ಯುವಕರನ್ನು ಸಂಘಟಿಸುವಲ್ಲಿ ಯಶಸ್ವಿಯಾಗಿದ್ದಾರೆ.
- ಇದರ ಜೊತೆಗೆ ಎರಡು ಬಾರಿ ರಾಜ್ಯ ಪ್ರವಾಸ ಮಾಡಿದ್ದಾರೆ.
- ಇಷ್ಟು ಮಾತ್ರವಲ್ಲದೇ ರಾಜ್ಯ ಸರ್ಕಾರ ಯಾವುದೇ ಹಗರಣ ಗಳನ್ನು ಮಾಡಿದ್ರೂ ತಕ್ಷಣವೇ ಎಚ್ಚೆತ್ತುಕೊಂಡು ಸರ್ಕಾರದ ವಿರುದ್ಧ ಹೋರಾಟದ ರೂಪುರೇಷೆ ರೂಪಿಸುವುದರ ಜೊತೆಗೆ ಎಲ್ಲಾ ನಾಯಕರನ್ನು ಒಗ್ಗೂಡಿಸುವ ಸಾಮರ್ಥ್ಯ ಹೊಂದಿದ್ದಾರೆ. ಆರ್ಎಸ್ಎಸ್ ಪ್ರಮುಖರು ಕೂಡ ಇದೇ ನಿರ್ಣಯ ನೀರ್ಣಯ ನೀಡಿದ್ದಾರೆ.
ಹೀಗೆ 5 ಪ್ರಮುಖ ಕಾರಣಗಳನ್ನಿಟ್ಟುಕೊಂಡು ವಿಜಯೇಂದ್ರರನ್ನು ಮುಂದುವರೆಸುವ ಉದ್ದೇಶವನ್ನು ಹೈಕಮಾಂಡ್ ನಾಯಕರು ಮಾಡಿದ್ದಾರೆ ಎನ್ನಲಾಗಿದೆ.