ರಾಯಚೂರು: ನಿಖಿಲ್ ಕುಮಾರಸ್ವಾಮಿ ಕಾರ್ಯಕ್ರಮದಲ್ಲಿ ಕಳ್ಳನೊಬ್ಬ ಪ್ರತ್ಯಕ್ಷನಾಗಿರುವ ಘಟನೆ ನಡೆದಿದೆ.
ಜಿಲ್ಲೆಯಲ್ಲಿ ನಡೆದ ನಿಖಿಲ್ ಕುಮಾರಸ್ವಾಮಿ ಕಾರ್ಯಕ್ರಮದ ನಂತರ ಅವರನ್ನು ಮಾತನಾಡಿಸಲು ಜೆಡಿಎಸ್ ಕಾರ್ಯಕರ್ತರು ಮುಗಿ ಬಿದ್ದಿದ್ದಾರೆ. ಈ ವೇಳೆ ಪ್ರತ್ಯಕ್ಷನಾಗಿರುವ ಖದೀಮ, ಸೈಲೆಂಟ್ ಆಗಿ 14 ಸಾವಿರ ರೂ. ಹಣ ಎಗರಿಸಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಖದೀಮನನ್ನು ವಶಕ್ಕೆ ಪಡೆದಿದ್ದಾರೆ.
ಹಣ ಎಗರಿಸಿದ್ದ ಕಳ್ಳನನ್ನು ಕೊನೆಗೆ ಪೊಲೀಸರು ಪೊಲೀಸ್ ಠಾಣೆಗೆ ಎಳೆದೊಯ್ದಿದ್ದಾರೆ. ಸಿಂಧನೂರು ಟೌನ್ ಪೊಲೀಸರಿಂದ ಕಳ್ಳನನ್ನು ವಶಕ್ಕೆ ಪಡೆಯಲಾಗಿದೆ.