ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಯಾವುದೇ ಬದಲವಾಣೆಯಾಗುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಬೆಂಗಳೂರಿನ ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ಮಾತನಾಡಿದ ಅವರು, ಯಾವ ಡೆವಲಪ್ಮೆಂಟ್ ಆಗುತ್ತಿಲ್ಲ. ನಾನೂ ದೆಹಲಿಗೆ ಹೋಗಿದ್ದೆ. ಬದಲವಾಣೆ ಎನ್ನುವುದು ಕೇವಲ ಕಲ್ಪನೆ ಅಷ್ಟೇ. ನಾನು ವೈಯುಕ್ತಿಕ ಕೆಲಸದ ಹಿನ್ನೆಲೆಯಲ್ಲಿ ಹೋಗಿದ್ದೆ. ಆರ್.ಅಶೋಕ್ ವಿರೋಧ ಪಕ್ಷದ ನಾಯಕರು. ಅವರು ಹೋಗಬಾರದು ಅಂತ ಇದೆಯಾ? ಯಾವುದೇ ಕಾರಣಕ್ಕೂ ವಿಪಕ್ಷ ನಾಯಕರ ಬದಲಾವಣೆ ಖಂಡಿತ ಆಗುವುದಿಲ್ಲ ಎಂದಿದ್ದಾರೆ.
ಯಾರ ಪಕ್ಷದಲ್ಲಿ ಅಸಮಾಧಾನದಿಂದ ಇದ್ದರೋ ಅವರು ಇಂದು ಪಕ್ಷದಲ್ಲಿ ಇಲ್ಲ. ಕೆ.ಎನ್.ರಾಜಣ್ಣ ಅವರು ಮೊದಲು ತಮ್ಮ ಪಕ್ಷದಲ್ಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಿ. ಅವರು ಅಧಿಕಾರದ ಅಮಲಿನಲ್ಲಿ ತೇಲುತ್ತಿದ್ದಾರೆ ಎಂದು ಹೇಳಿದ್ದಾರೆ.