ಸರ್ಕಾರದ ವಿರುದ್ಧವೇ ಕಾಂಗ್ರೆಸ್ ಶಾಸಕರು ಅಸಮಾಧಾನಗೊಳ್ಳುತ್ತಿರುವುದು ಹಾದಿ ಬೀದಿಗೆ ಬಂದು ನಿಂತಿದೆ. ಇದು ಪಕ್ಷಕ್ಕೆ ತೀವ್ರ ಮುಜುಗುರ ಸೃಷ್ಟಿಸುತ್ತಿದೆ. ಇಂತಹ ಶಾಸಕರ ಕಾರ್ಯ ಶ್ಲಾಘನೀಯ ಎಂದು ಈಗ ಜೆಡಿಎಲ್ಪಿ ನಾಯಕ ಸುರೇಶ್ ಬಾಬು ಪತ್ರ ಬರೆದಿದ್ದಾರೆ.
ಶಾಸಕರಾದ ಬಿ. ಆರ್. ಪಾಟೀಲ್, ರಾಜು ಕಾಗೆ, ಎನ್.ವೈ. ಗೋಪಾಲಕೃಷ್ಣ, ಬೇಳೂರು ಗೋಪಾಲ ಕೃಷ್ಣ ಅವರು ತಮ್ಮ ಸರ್ಕಾರದ ವಿರುದ್ಧವೇ ಮುಗಿ ಬಿದ್ದಿದ್ದಾರೆ. ಇದರ ಮಧ್ಯೆ ಈಗ ಸುರೇಶ್ ಬಾಬು ಪತ್ರ ಬರೆದಿದ್ದಾರೆ. ತಮ್ಮ ಕ್ಷೇತ್ರದ ಜನರ ಪರವಾಗಿ ವಸತಿ ಇಲಾಖೆ ಅವ್ಯವಾರದ ಬಗ್ಗೆ ಧ್ವನಿ ಎತ್ತಿರುವುದು ಶ್ಲಾಘನೀಯ. ನಿಮ್ಮ ಜನಪರ ಹೋರಾಟಕ್ಕೆ ನಮ್ಮ ಶಾಸಕರ ಸಂಪೂರ್ಣ ಬೆಂಬಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.