ಕೊಪ್ಪಳ: ಖಾಸಗಿ ಕಂಪನಿಗಳನ್ನು ನಂಬಿ ಮೋಸ ಹೋದ ರೈತರು ತಾವು ಬೆಳೆದ ಬೆಳೆಯನ್ನು ಕಿತ್ತು ಹಾಕುತ್ತಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಹತ್ತಿ ಬೀಜೋತ್ಪಾದನೆಗಾಗಿ ರೈತರು ಹತ್ತಿಯನ್ನು ಬೆಳೆದಿದ್ದರು. ಆದರೆ, ಈಗ ಬೀಜದ ಕಂಪನಿಗೂ ಕೈ ಕೊಟ್ಟಿವೆ. ಓರ್ವ ರೈತರಿಂದ ಕೇವಲ 2 ಕ್ವಿಂಟಾಲ್ ಬೀಜಗಳನ್ನು ಮಾತ್ರ ಖರೀದಿಸುವುದಾಗಿ ಕಂಪನಿ ಹೇಳುತ್ತಿದೆ. ಈ ಬಾರಿ ಉತ್ತಮ ಇಳುವರಿ ಬಂದಿದ್ದು, ಒಂದೊಂದು ಎಕರೆಗೆ ನಾಲ್ಕೈದು ಕ್ವಿಂಟಾಲ್ ಹತ್ತಿ ಬೀಜ ಇಳುವರಿ ಬಂದಿದೆ. ಆದರೆ, ಬೀಜ ಉತ್ಪದನೆಯ ಕಂಪನಿಗಳು ರೈತರ ಕೈಗೆ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಹತ್ತಿಯನ್ನು ಖರೀದಿ ಮಾಡದೆ ಬೀಜದ ಕಂಪನಿಗಳು ಮೋಸ ಮಾಡಿವೆ. ಇದರಿಂದಾಗಿ ನೂರಾರು ರೈತರು ಅತಂತ್ರರಾಗಿದ್ದಾರೆ. ಹೀಗಾಗಿ ರೈತರು ತಾವೇ ಬೆಳೆದ ಹತ್ತಿಯನ್ನು ಕಿತ್ತು ಹಾಕುತ್ತಿದ್ದು, ಹತ್ತಿ ಹೊಲಕ್ಕೆ ಕುರಿಗಳನ್ನು ಬಿಟ್ಟು ಮೇಯಿಸಲಾಗುತ್ತಿದೆ.-