ಬೆಂಗಳೂರು: ಕುಡುಕರಿಗೆ ಸಾರ್ವಜನಿಕ ಬಸ್ ನಿಲ್ದಾಣವೇ ಬಾರ್ ಎನ್ನುವಂತಾಗಿದೆ. ಇವರಿಗೆ ಹೇಳುವವರು, ಕೇಳುವವರು ಯಾರು ಇಲ್ವಾ? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೌದು. ಬೆಂಗಳೂರಿನ ರಾಯನ್ ಸರ್ಕಲ್ ಬಳಿ ಇರುವ ಬಸ್ ನಿಲ್ದಾಣವೇ ಕುಡುಕರ ಅಡ್ಡೆಯಾಗಿದೆ. ಸಾರ್ವಜನಿಕರ ಬಸ್ ಸ್ಟ್ಯಾಂಡ್ ನ್ನು ಕುಡುಕರು ಎಣ್ಣೆ ಅಡ್ಡೆ ಮಾಡಿಕೊಂಡಿದ್ದಾರೆ. ಕುಡುಕರ ಹಾವಳಿಗೆ ನಿತ್ಯ ಸ್ಥಳೀಯರು ಬೇಸತ್ತಿದ್ದಾರೆ. ಬೆಳ್ಳಂಬೆಳಿಗ್ಗೆ ಜನರು ಓಡಾಡುವ ಬಸ್ ನಿಲ್ದಾಣವನ್ನು ಬಾರ್ ಕೌಂಟರ್ ಮಾಡಿಕೊಂಡಿದ್ದಾರೆ. ಪೊಲೀಸ್ ಠಾಣೆಯಿಂದ ಕೂದಲಳತೆ ದೂರದಲ್ಲಿ ಬಸ್ ನಿಲ್ದಾಣವಿದೆ.
ನಗರದ ರಾಯನ್ ಸರ್ಕಲ್ ಬಳಿ ಇರುವ ಬಸ್ ನಿಲ್ದಾಣವೇ ಕುಡುಕರ ಅಡ್ಡೆಯಾಗಿದೆ. ಬೆಳಗ್ಗೆಯಿಂದಲೇ ಕುಡುಕರು ಬಸ್ ಸ್ಟ್ಯಾಂಡ್ ನಲ್ಲಿ ಕುಳಿತು ಎಣ್ಣೆ ಹೊಡೆಯುತ್ತಿದ್ದಾರೆ. ಇದರಿಂದಾಗಿ ಬಸ್ ನಿಲ್ದಾಣಕ್ಕೆ ಬರುವ ಮಕ್ಕಳು ಹಾಗೂ ಮಹಿಳೆಯರಿಗೆ ಕಿರಿಕಿರಿಯಾಗುತ್ತಿದೆ. ಈ ಕುರಿತು ದೂರು ನೀಡಿದರೂ ಪೊಲೀಸರು ಕ್ಯಾರೇ ಎನ್ನುತ್ತಿಲ್ಲ ಎದುಸಾರ್ವಜನಿಕ ಬಸ್ ನಿಲ್ದಾಣವೇ ಕುಡುಕರ ಅಡ್ಡೆ
ಬೆಂಗಳೂರು: ಕುಡುಕರಿಗೆ ಸಾರ್ವಜನಿಕ ಬಸ್ ನಿಲ್ದಾಣವೇ ಬಾರ್ ಎನ್ನುವಂತಾಗಿದೆ. ಇವರಿಗೆ ಹೇಳುವವರು, ಕೇಳುವವರು ಯಾರು ಇಲ್ವಾ? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೌದು. ಬೆಂಗಳೂರಿನ ರಾಯನ್ ಸರ್ಕಲ್ ಬಳಿ ಇರುವ ಬಸ್ ನಿಲ್ದಾಣವೇ ಕುಡುಕರ ಅಡ್ಡೆಯಾಗಿದೆ. ಸಾರ್ವಜನಿಕರ ಬಸ್ ಸ್ಟ್ಯಾಂಡ್ ನ್ನು ಕುಡುಕರು ಎಣ್ಣೆ ಅಡ್ಡೆ ಮಾಡಿಕೊಂಡಿದ್ದಾರೆ. ಕುಡುಕರ ಹಾವಳಿಗೆ ನಿತ್ಯ ಸ್ಥಳೀಯರು ಬೇಸತ್ತಿದ್ದಾರೆ. ಬೆಳ್ಳಂಬೆಳಿಗ್ಗೆ ಜನರು ಓಡಾಡುವ ಬಸ್ ನಿಲ್ದಾಣವನ್ನು ಬಾರ್ ಕೌಂಟರ್ ಮಾಡಿಕೊಂಡಿದ್ದಾರೆ. ಪೊಲೀಸ್ ಠಾಣೆಯಿಂದ ಕೂದಲಳತೆ ದೂರದಲ್ಲಿ ಬಸ್ ನಿಲ್ದಾಣವಿದೆ.
ನಗರದ ರಾಯನ್ ಸರ್ಕಲ್ ಬಳಿ ಇರುವ ಬಸ್ ನಿಲ್ದಾಣವೇ ಕುಡುಕರ ಅಡ್ಡೆಯಾಗಿದೆ. ಬೆಳಗ್ಗೆಯಿಂದಲೇ ಕುಡುಕರು ಬಸ್ ಸ್ಟ್ಯಾಂಡ್ ನಲ್ಲಿ ಕುಳಿತು ಎಣ್ಣೆ ಹೊಡೆಯುತ್ತಿದ್ದಾರೆ. ಇದರಿಂದಾಗಿ ಬಸ್ ನಿಲ್ದಾಣಕ್ಕೆ ಬರುವ ಮಕ್ಕಳು ಹಾಗೂ ಮಹಿಳೆಯರಿಗೆ ಕಿರಿಕಿರಿಯಾಗುತ್ತಿದೆ. ಈ ಕುರಿತು ದೂರು ನೀಡಿದರೂ ಪೊಲೀಸರು ಕ್ಯಾರೇ ಎನ್ನುತ್ತಿಲ್ಲ ಎದು