ಮಂಗಳೂರು: 10 ದಿನಗಳ ಅಂತರದಲ್ಲಿ ಒಂದೇ ಮನೆಯ 7 ದನಗಳು ಸಾವನ್ನಪ್ಪಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಯಾರೋ ದುಷ್ಕರ್ಮಿಗಳು ದನಗಳಿಗೆ ವಿಷ ನೀಡಿ ಸಾಯಿಸಿರುವ ಆರೋಪವೊಂದು ಕೇಳಿ ಬಂದಿದೆ. ಮಂಗಳೂರಿನ ನೀರುಮಾರ್ಗದ ಕೆಲರಾಯಿ ಚರ್ಚ್ ಬಳಿ ಈ ಘಟನೆ ನಡೆದಿದೆ. ಜೋಸೆಫ್ ಸ್ಟಾನಿ ಪ್ರಕಾಶ್ ಎಂಬುವವರ ಮನೆಯ ದನಗಳು ಸಾವನ್ನಪ್ಪಿವೆ. ಪ್ರಕಾಶ್, ಹೈನುಗಾರಿಕೆ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸುಮಾರು 30ಕ್ಕೂ ಅಧಿಕ ದನಗಳನ್ನು ಸಾಕುತ್ತಿದ್ದರು. ಆದರೆ, ನಿತ್ರಾಣಗೊಂಡು 7 ಹಸುಗಳು ಸಾವನ್ನಪ್ಪಿವೆ.
ಮೇಯಲು ಹೋದ ಸಂದರ್ಭದಲ್ಲಿ ಯಾರೋ ದುಷ್ಕರ್ಮಿಗಳು ವಿಷವುಣಿಸಿದ್ದಾರೆ ಎಂದು ಜೋಸೆಫ್ ಸ್ಟಾನಿ ಪ್ರಕಾಶ್ ಆರೋಪಿಸಿದ್ದಾರೆ. ಈ ಕುರಿತು ಮಂಗಳೂರು ಗ್ರಾಮಾಂತರ ಠಾಣಎಗೆ ದೂರು ದಾಖಲಾಗಿದೆ.