ಬೆಂಗಳೂರು: ಹೆಣ್ಣುಮಕ್ಕಳ ಕಾಲೇಜ್ ಫೀಸ್ ಗೆಂದು ಇಟ್ಟಿದ್ದ ಹಣವನ್ನು ಖದೀಮರು ಎಗರಿಸಿ ಪರಾರಿಯಾಗಿರುವ ಘಟನೆಯೊಂದು ನಡೆದಿದೆ.
ಬೆಂಗಳೂರು ಪ್ಯಾಲೇಸ್ ಆವರಣದ ಮನೆಯಲ್ಲಿ ಈ ಘಟನೆ ನಡೆದಿದೆ. ಪ್ಯಾಲೇಸ್ ಆವರಣದ ಗಾರ್ಡನ್ ಆಗಿರುವ ಶ್ರೀನಿವಾಸ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ. ಶನಿವಾರ ಮಧ್ಯಾಹ್ನ ಯಾರೂ ಇಲ್ಲದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಶ್ರೀನಿವಾಸ್ ದಂಪತಿ ಕೆಲಸಕ್ಕೆ ಹಾಗೂ ಮಕ್ಕಳು ಕಾಲೇಜಿಗೆ ಹೋಗಿದ್ದ ಸಂದರ್ಭದಲ್ಲಿ ಒಳ ನುಗ್ಗಿದ್ದ ಖದೀಮರು ಕಳ್ಳತನ ಡಿದ್ದಾರೆ. ಮನೆಯ ಬಾಗಿಲು ಮುರಿದು, ಬೀರು ಒಡೆದು 65 ಸಾವಿರ ರೂ. 5 ಗ್ರಾಂ. ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ಶ್ರೀನಿವಾಸ್ ಮೂವರು ಹೆಣ್ಣು ಮಕ್ಕಳ ಕಾಲೇಜು ಫೀಸ್ ಕಟ್ಟುವುದಕ್ಕಾಗಿ ಹಣ ಹೊಂದಿಸಿ ಇಟ್ಟಿದ್ದರು ಎನ್ನಲಾಗಿದೆ. ಸಾಲ ಮಾಡಿ ಹಣ ತಂದಿದ್ದರು ಎನ್ನಲಾಗಿದೆ. ಈಗ ಮಕ್ಕಳ ಫೀಸ್ ಕಟ್ಟಲು ಹಣ ಇಲ್ಲದೆ ಶ್ರೀನಿವಾಸ್ ಕಂಗಾಲಾಗಿದ್ದಾರೆ. ಈ ಕುರಿತು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.