ಹಾಸನ: ಕೇಂದ್ರ ಸಚಿವ ವಿ.ಸೋಮಣ್ಣ ಅವರ ಕಾಲಿಗೆ ಹಾಸನ ಜಿಲ್ಲಾಧಿಕಾರಿ ಬಿದ್ದು ಆಶೀರ್ವಾದ ಪಡೆದಿರುವ ಘಟನೆ ನಡೆದಿದೆ.
ಅರಸೀಕೆರೆ (Arasikere) ತಾಲೂಕಿನ ಕೋಡಿಮಠಕ್ಕೆ ಕೇಂದ್ರ ಸಚಿವ ವಿ ಸೋಮಣ್ಣ (V Somanna) ಭೇಟಿ ನೀಡಿದ್ದ ಸಂದರ್ಭದಲ್ಲಿ ಹಾಸನದ ನೂತನ ಜಿಲ್ಲಾಧಿಕಾರಿ (Hassan DC) ಸೋಮಣ್ಣ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ
ಸ್ವಾಮೀಜಿ ಭೇಟಿಗೆ ಸಚಿವರು ಆಗಮಿಸಿದ್ದ ವೇಳೆ ನೂತನ ಜಿಲ್ಲಾಧಿಕಾರಿ ಕೆಎಸ್ ಲತಾಕುಮಾರಿ (KS Lathakumari) ಸೋಮಣ್ಣ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಆನಂತರ ನಿಮ್ಮನ್ನು ನೋಡಿ ಖುಷಿಯಾಯಿತು ಎಂದು ಹೇಳಿದ್ದಾರೆ.