ಭ್ರಷ್ಟಾಚಾರ ವಿಷಯವಾಗಿ ತಮ್ಮ ಹೇಳಿಕೆಗೆ ಮತ್ತೆ ಬಿ.ಆರ್. ಪಾಟೀಲ್ ಪುನರುಚ್ಛಾರ ಮಾಡಿರುವ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಯಾವುದೇ ಕಾರಣಕ್ಕೂ ಈ ಆರೋಪವನ್ನು ಒಪ್ಪುವುದಿಲ್ಲ. ಈಗಾಗಲೇ ಈ ವಿಷಯ ಸಿಎಂ ಅವರ ಗಮನಕ್ಕೆ ಬಂದಿದೆ. ಅವರು ಏನು ಕ್ರಮ ತೆಗೆದುಕೊಳ್ಳಬೇಕು ಅದನ್ನ ತೆಗೆದುಕೊಳ್ಳುತ್ತಾರೆ.
ಯಾವ ಸರ್ಕಾರದ ಮಂತ್ರಿ ಹಣ ತೆಗೆದುಕೊಳ್ಳುತ್ತಾರೆ? ಎಂದು ಪ್ರಶ್ನಿಸಿದ ಅವರು, ಯಾವ ಉದ್ಧೇಶದಿಂದ ಮಾತನಾಡಿದ್ದಾರೆ ಎಂಬುವುದು ನಮಗೆ ಗೊತ್ತಿಲ್ಲ. ಇದನ್ನು ನಾನು ಖಂಡಿಸುತ್ತೇನೆ. ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುವುದು ಗೊತ್ತಿಲ್ಲ. ಈ ಕುರಿತು ಕುಳಿತು ಚರ್ಚೆ ಮಾಡುತ್ತೇನೆ ಎಂದಿದ್ದಾರೆ.