ರಾಜಧಾನಿ ಬೆಂಗಳೂರಲ್ಲಿ ಅದೆಷ್ಟೋ ಕಡೆ ರಾಶಿ ರಾಶಿ ಕಸ ಆವರಿಸಿರುತ್ತೆ. ಗ್ರೀನ್ ಸಿಟಿ ಬೆಂಗಳೂರಿಗರ ನಿದ್ದೆಗೆಡಿಸಿರುವ ಈ ಕಸದ ಸಮಸ್ಯೆ ಇತ್ಯರ್ಥಕ್ಕೀಗ ಸರ್ಕಾರದ ನೂತನ ಮಾರ್ಗ ಕಂಡುಕೊಂಡಿದೆ.
ಹೌದು, ಇನ್ಮುಂದೆ ನಿಮ್ಮ ಕಣ್ಣಿಗೆ ಕಸ ಬಿದ್ದರೆ ನೀವೇ ಅದಕ್ಕೊಂದು ಪರಿಹಾರವನ್ನು ಹುಡುಕಬಹುದಾಗಿದೆ. ರಾಜ್ಯ ಸರ್ಕಾರ ಬೆಂಗಳೂರನ್ನು ಕಸ ಮುಕ್ತಗೊಳಿಸುವ ನಿಟ್ಟಿನಲ್ಲಿ ದೊಡ್ದದೊಂದು ಹೆಜ್ಜೆ ಇಟ್ಟಿದೆ. ಈ ನಿಟ್ಟಿನಲ್ಲೇ ಕಸ ಕಂಡ್ರೆ ಫೋಟೋ ಕಳುಹಿಸಿ ಅಭಿಯಾನ ಆರಂಭಿಸಿದೆ. ಬೆಂಗಳೂರು ತ್ಯಾಜ್ಯ ನಿರ್ವಹಣೆಗೆ ಈಗಾಗಲೇ ಸಹಾಯವಾಣಿಯನ್ನು ಘೋಷಿಸಲಾಗಿದ್ದು, ಸಾರ್ವಜನಿಕರು ಕಸವಿರುವ ಜಾಗದ ಫೋಟೋ ತೆಗೆದು ಅದನ್ನು ಸಹಾಯವಾಣಿ ಸಂಖ್ಯೆಗೆ ರವಾನಿಸಬಹುದಾಗಿದೆ.
ಹೀಗೆ ನೀವು ಕಳುಹಿಸಿದ ಫೋಟೋ ದೂರಿಗೆ ಒಂದು ವಾರದಲ್ಲಿ ಪಾಲಿಕೆ ಪರಿಹಾರ ನೀಡಲಿದೆ. ಈ ಮೂಲಕ ಸ್ವಚ್ಛ ಬೆಂಗಳೂರು ಸಂಕಲ್ಪ ತೊಟ್ಟಿದ್ದೇವೆ ಅಂತಲೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಮುಂದೆ ನಿಮ್ಮ ಕಣ್ಣಿಗೆ ಕಸ ಬಿದ್ದರೆ 9448197197/1533 ಗೆ ಫೋಟೋ ಕಳುಹಿಸಬಹುದಾಗಿದೆ