ಶಾಸಕ ಪ್ರದೀಪ್ ಈಶ್ವರ್ ರೂಪಿಸಿರುವ ನಮ್ಮೂರಲ್ಲಿ ನಮ್ಮ ಶಾಸಕ ಕಾರ್ಯಕ್ರಮದ ಬಗ್ಗೆ ಡಾ.ಕೆ ಸುಧಾಕರ್ ವ್ಯಂಗ್ಯವಾಡಿದ್ದರು. ಇದಕ್ಕೆ ಶಾಸಕ ಪ್ರದೀಪ್ ಈಶ್ವರ್ ಕಿಡಿಕಾರಿದ್ದಾರೆ.
ಊರೂರು ಸುತ್ತಿ ರಸ್ತೆಗಳೆಲ್ಲಾ ಕಿತ್ತು ಹೋಗಿವೆ ಎಂದು ಸಂಸದ ಸುಧಾಕರ್ ಹೇಳಿದ್ದರು. ಈ ಬಗ್ಗೆ ಪ್ರದೀಪ್ ಈಶ್ವರ್ ಮಾತನಾಡಿ, ಸುಧಾಕರ್ ಹತ್ತು ವರ್ಷದಲ್ಲಿ ಒಂದು ಗ್ರಾಮಕ್ಕೂ ಹೋಗಿಲ್ಲ.
ನಾನು ಎರಡು ವರ್ಷಗಳಲ್ಲಿ 180 ಗ್ರಾಮಗಳು ಸುತ್ತಿದ್ದೇನೆ. ಸುಧಾಕರ್ ಅವಧಿಯಲ್ಲಿ ಕಿತ್ತು ಹೋಗಿರುವ ರಸ್ತೆಗಳನ್ನೆಲ್ಲ ಸರಿಪಡಿಸಲು ಬಂದಿದ್ದೇನೆ. ಚಿಕ್ಕಬಳ್ಳಾಪುರ ನಗರದ ವಾರ್ಡ್ ಮನೆಮನೆಗೂ ಸುತ್ತಿದ್ದೇನೆ. ಸುಧಾಕರ್ಗೆ ನನ್ನ ಮೇಲೆ ಪ್ರೀತಿ ಹೆಚ್ಚಾಗಿದೆ. ಹಾಗೆ ಮುಂದುವರೆಯಲಿ ಎಂದು ತಿರುಗೇಟು ನೀಡಿದ್ದಾರೆ.