ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆಗೆ ಸರ್ಕಾರ ಸಕಲ ಸಿದ್ಧತೆ ನಡೆಸಿದೆ.
ಜೂ. 27ರಂದು ಸರ್ಕಾರ ಹಾಗೂ ಬಿಬಿಎಂಪಿ ವತಿಯಿಂದ ಕೆಂಪೇಗೌಡ ಜಯಂತಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ವೇಳೆ ಸರ್ಕಾರವು ಪ್ರತಿ ವರ್ಷದಂತೆ ಈ ವರ್ಷವೂ ಕೆಂಪೇಗೌಡ ಪ್ರಶಸ್ತಿ ನೀಡಲು ಮುಂದಾಗಿದ್ದು, ಶಾಸಕರು, ಸಚಿವರು ತಮ್ಮವರಿಗೆ ಕೊಡಿಸಲು ದುಂಬಾಲು ಬಿದ್ದಿದ್ದಾರೆ.
ಕಳೆದ ವರ್ಷ ಕೆಂಪೇಗೌಡರ ದಿನಚರಣೆ ಮಾಡಿಲ್ಲ. ಈ ಬಾರಿ ವಿಜೃಂಭಣೆಯಿಂದ ಅಚರಿಸಲು ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಕಳೆದ ವರ್ಷ 163 ಗಣ್ಯರ ಪ್ರಶಸ್ತಿ ಪಟ್ಟಿ ಅಂತಿಮ ಮಾಡಲಾಗಿತ್ತು. ಈ ಬಾರಿ 163 ಗಣ್ಯರು ಸೇರಿದಂತೆ ಮತ್ತಷ್ಟು ಜನರನ್ನು ಪ್ರಶಸ್ತಿ ಪಟ್ಟಿಗೆ ಸೇರಿಸಲು ಲಾಬಿ ನಡೆದಿದೆ. ಪ್ರಶಸ್ತಿಗಾಗಿ ಬಹುತೇಕರು ಡಿಸಿಎಂಗೆ ದುಂಬಾಲು ಬಿದ್ದಿದ್ದಾರೆಂದು ತಿಳಿದು ಬಂದಿದೆ.