ಬಿಜೆಪಿ-ಜೆಡಿಎಸ್ ಮೈತ್ರಿ ಗುಟ್ಟಿನ ಬಗ್ಗೆ ಜೆಡಿಎಸ್ ಸಿಎಲ್ಪಿ ನಾಯಕ ಸಿ.ಬಿ ಸುರೇಶ್ ಬಾಬು ಮಾತನಾಡಿದ್ದಾರೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹೊಂದಾಣಿಕೆ ಕೊರತೆ ಆಗಿದೆ ಅಂತಾ ನಾವು ಸ್ಪಷ್ಟವಾಗಿ ಹೇಳುತ್ತೇವೆ.
ಯಾವತ್ತೂ ದೇವೇಗೌಡರು ಬಿಜೆಪಿಯತ್ತ ಮುಖ ಮಾಡಿರಲಿಲ್ಲ. ಮೈತ್ರಿಯಿಂದ ಜೆಡಿಎಸ್ ವರ್ಚಸ್ಸು ಕಡಿಮೆಯಾಗುತ್ತದೆ. ಇದಕ್ಕೆ ಈಗಾಗಲೇ ಕುಮಾರಣ್ಣ ಬೆಂಗಳೂರಿನಲ್ಲಿ ಉತ್ತರ ಕೊಟ್ಟಿದ್ದಾರೆ. ನಮ್ಮ ಪಕ್ಷವನ್ನು ಎಷ್ಟು ಗೌರವಯುತವಾಗಿ ನಡೆಸಿಕೊಳ್ಳುತ್ತಿದ್ದಾರೆ.
ಕೇಂದ್ರದಲ್ಲಿ ಯಾವ ರೀತಿ ಹೊಂದಾಣಿಕೆ ಇದೆ. ರಾಜ್ಯದಲ್ಲಿ ಹೊಂದಾಣಿಕೆ ಕೊರತೆಯಾಗಿದೆ ಎಂದು ನಾವು ಸ್ಪಷ್ಟವಾಗಿ ಹೇಳಿದ್ದೇವೆ ಎಂದಿದ್ದಾರೆ. ರಾಜ್ಯ, ಜಿಲ್ಲಾ, ತಾಲ್ಲೂಕು ಮಟ್ಟಗಳಲ್ಲಿ ಸಮನ್ವಯ ಸಮಿತಿಗಳಾಗಲಿಲ್ಲ. ಅದೆಲ್ಲಾ ಆದರೆ ಜನರಿಗೆ ಗೊಂದಲ ಇರಲ್ಲಾ ಎನ್ನುವ ದೃಷ್ಟಿಯಿಂದ ಇದನ್ನು ನಾವು ಅವಾಗಿನಿಂದ ಬಯಸುತ್ತಿದ್ದೇವೆ ಎಂದಿದ್ದಾರೆ. ದೇವೇಗೌಡರು ಮೋದಿ ಅವರನ್ನು ನೋಡಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ.
ಕುಮಾರಣ್ಣ ಬಿಜೆಪಿ ಜೊತೆ ಮೈತ್ರಿ ಸರ್ಕಾರ ಮಾಡಲು ಹೋದಾಗ ದೇವೇಗೌಡರು, ಕುಮಾರಸ್ವಾಮಿಯವರನ್ನೇ ಮಾತನಾಡಿಸದಿರುವುದನ್ನು ನೋಡಿದ್ದೇವೆ. ದೇವೇಗೌಡರಿಗೆ ಸಿದ್ಧಾಂತವಿದೆ. ಈಗ ಮೋದಿ ಅವರನ್ನು ನಂಬಿದ್ದಾರೆ ಎಂದಿದ್ದಾರೆ