ಬೆಂಗಳೂರು: ಪಕ್ಷ ಸಂಘಟನೆಯ ಹಿತದೃಷ್ಟಿಯಿಂದ ರಾಜ್ಯ ಪ್ರವಾಸಕ್ಕೆ ನಿಖಿಲ್ ಕುಮಾರಸ್ವಾಮಿ ಹೊರಟಿದ್ದಾರೆ.
ಹೀಗಾಗಿ ಈಗ ಬಿಜೆಪಿ ನಾಯಕರ ಕಣ್ಣು ನಿಖಿಲ್ ಕುಮಾರಸ್ವಾಮಿ ರಾಜ್ಯ ಪ್ರವಾಸದ ಮೇಲೆ ಬಿದ್ದಿದೆ. ನಿಖಿಲ್ ಕುಮಾರಸ್ವಾಮಿ ಏಕಾಏಕಿ ಪಕ್ಷ ಸಂಘಟನೆ ಹೆಸರಿನಲ್ಲಿ ಪ್ರವಾಸಕ್ಕೆ ಮುಂದಾಗುತ್ತಿದ್ದಂತೆ ಬಿಜೆಪಿ ನಾಯಕರು ಆಲರ್ಟ್ ಆಗಿದ್ದಾರೆ. ಅಷ್ಟಕ್ಕೂ ನಿಖಿಲ್ ಕುಮಾರಸ್ವಾಮಿ ಪ್ರವಾಸಕ್ಕೂ ಬಿಜೆಪಿ ನಾಯಕರು ಆಲರ್ಟ್ ಆಗುವುದಕ್ಕೂ ಕಾರಣವೇನು?
ಸಾಲು ಸಾಲು ವಿಚಾರಗಳನ್ನು ಇಟ್ಟುಕೊಂಡು ಆಲರ್ಟ್ ಆಗಿರುವ ಬಿಜೆಪಿ ನಾಯಕರು
1. ನಿಖಿಲ್ ಕುಮಾರಸ್ವಾಮಿ ಅವರ ತಂದೆ ಹೆಚ್.ಡಿ. ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿಗಳು, ಹಾಲಿ ಕೇಂದ್ರದಲ್ಲಿ ಸಚಿವರು
2. ಹಳೆಯ ಮೈಸೂರು ಭಾಗದಲ್ಲಿ ಈ ಹಿಂದಿನಿಂದಲೂ ಕಾಂಗ್ರೆಸ್ ಪಕ್ಷಕ್ಕೆ ಸೆಡ್ಡು ಹೊಡೆಯುತ್ತಾ ಬಂದಿರುವುದು ಜೆಡಿಎಸ್ ಹೊರತು ಬಿಜೆಪಿ ಅಲ್ಲ
3. ಈಗ ಸದ್ಯ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡು ಬಿಜೆಪಿ ಅಧಿಕೃತ ವಿಪಕ್ಷವಾಗಿದೆ
4. ನಗರ ಪ್ರದೇಶಗಳಲ್ಲಿ ಜೆಡಿಎಸ್ಗಿಂತ ಬಿಜೆಪಿಯ ಬಲವರ್ಧನೆ ಹೆಚ್ಚು
5. ಗ್ರಾಮೀಣ ಭಾಗದಲ್ಲಿ ಬಿಜೆಪಿ ಈವರೆಗೂ ಹಾಕಿಕೊಳ್ಳಲು ಆಗದ ಅಡಿಪಾಯವನ್ನು ಜೆಡಿಎಸ್ ಹಾಕಿಕೊಂಡಿದೆ
6. ಈಗ ನಿಖಿಲ್ ಕುಮಾರಸ್ವಾಮಿ ಅವರು ಅದೇ ಹಳೆಯ ಮೈಸೂರು ಭಾಗದಲ್ಲಿ ಪ್ರವಾಸ ಮಾಡಿ, ತಮ್ಮ ಪಕ್ಷಕ್ಕೆ ಭದ್ರ ಬುನಾದಿ ಹಾಕಿಕೊಂಡರೆ, ಬಿಜೆಪಿ ಗತಿಯೇನು?
7. ಈ ಹಿಂದೆ ನಡೆದಿರುವ 2023 ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಆಖಾಡಕ್ಕೆ ಇಳಿದಿದ್ದ ಬಿಜೆಪಿ ಹಳೆಯ ಮೈಸೂರು ಭಾಗದಲ್ಲಿ ಗಣನೀಯ ಸೋಲುಂಡಿದೆ
8. ಈಗ ನಿಖಿಲ್ ಕುಮಾರಸ್ವಾಮಿ ಆ ಭಾಗದಲ್ಲಿ ಪ್ರವಾಸ ಭದ್ರ ಅಡಿಪಾಯ ಹಾಕಿಕೊಂಡಿದ್ದೇ ಆದ್ರೆ, ಬಿಜೆಪಿ ಪಕ್ಷವನ್ನು ಪ್ರತಿನಿಧಿಸುವ ಆ ಭಾಗದ ಕಾರ್ಯಕರ್ತರ ಗತಿಯೇನು?
9. ಇನ್ನು ಚುನಾವಣಾ ಹೊಸ್ತಲಿನಲ್ಲಿ ಸೀಟ್ ಶೇರಿಂಗ್ ವಿಚಾರ ಬಂದರೆ, ಈ ಭಾಗದಲ್ಲಿನ ಬಿಜೆಪಿ ಕಾರ್ಯಕರ್ತರು ಕ್ಷೇತ್ರವನ್ನೇ ತ್ಯಾಗ ಮಾಡುವ ವಾತಾವರಣ ನಿರ್ಮಾಣ ಆಗುತ್ತದೆ
10. ನಾವು ಕಷ್ಟಪಟ್ಟು ಆಯ್ಕೆ ಮಾಡಿಕೊಂಡು ಬೇರೆಯವರಿಗೆ ಕ್ಷೇತ್ರ ಬಿಟ್ಟುಕೊಡಬೇಕಾಗುತ್ತದೆ
11. ಈಗಾಗಲೇ 3 ಚುನಾವಣೆಯಲ್ಲಿ ಸೋಲುಂಡ ನಿಖಿಲ್ ಕುಮಾರಸ್ವಾಮಿಗೆ ಅನುಕಂಪ ವರ್ಕ್ಔಟ್ ಆದ್ರೆ, ನಮ್ಮ ಪಾಡೇನು?
12. ಇತ್ತ ಬಿಜೆಪಿ ಹೈಕಮಾಂಡ್ ನಾಯಕರ ಜೊತೆಗೆ ಕುಮಾರಸ್ವಾಮಿ ಕೇಂದ್ರದಲ್ಲಿ ಸಚಿವರಾಗಿರುವ ಕಾರಣ ಒನ್ ಟು ಒನ್ ಕಾಂಟ್ಯಾಕ್ಟ್ ಇಟ್ಟುಕೊಂಡಿದ್ದಾರೆ
13. ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ ಆರ್ಥಿಕವಾಗಿಯೂ ಹಿಂದುಳಿದಿಲ್ಲ
14. ನಾವುಗಳು ನಿಖಿಲ್ ಕುಮಾರಸ್ವಾಮಿ ಅವರ ಪ್ರವಾಸವನ್ನು ಸಲೀಸಾಗಿ ತೆಗೆದುಕೊಳ್ಳುವಂತಿಲ್ಲ
15. ಬಹಳ ಎಚ್ಚರಿಕೆಯಿಂದ ಈಗ ಇರದೇ ಹೋದರೆ, ಮುಂದಿನ ಚುನಾವಣೆಯಲ್ಲಿ ನಮಗೆ ಕ್ಷೇತ್ರ ಬಿಟ್ಟು ಹೋಗಬಹುದು. ಇಲ್ಲ ನಿಖಿಲ್ ಕುಮಾರಸ್ವಾಮಿ ಅವರ ಪಕ್ಷ ಬಲವರ್ಧನೆ ಆಗಿ ಬಿಡಬಹುದು
ಈ ಕಾರಣಗಳಿಂದ ನಿಖಿಲ್ ಕುಮಾರಸ್ವಾಮಿ ಅವರ ಪ್ರವಾಸದ ಮೇಲೆ ಬಿಜೆಪಿ ನಾಯಕರು ಕಣ್ಣಿಟ್ಟಿದ್ದಾರೆ.