ಓಯೋ ರೂಮ್ ನಲ್ಲಿ ರೇಪ್ ಮಾಡಿ ಮಹಿಳೆಯೋರ್ವರನ್ನು 17 ಬಾರಿ ಚಾಕುವಿನಿಂದ ಇರಿದು ತಿರಾತಕನೊಬ್ಬ ಕೊಲೆ ಮಾಡಿದ್ದ. ಈ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲಿ ಮಹಿಳಾ ಆಯೋಗಕ್ಕೆ ಸಾಲು ಸಾಲು ದೂರುಗಳು ಹರಿದು ಬರುತ್ತಿವೆ.
ಬೆಂಗಳೂರು ನಗರದಲ್ಲೇ ಮಹಿಳಾ ಆಯೋಗಕ್ಕೆ ಹೆಚ್ಚು ದೂರುಗಳು ಬಂದಿವೆ. ಕಾಮುಕರು ಮದುವೆಯಾಗುವುದಾಗಿ ನಂಬಿಸಿ ಹಲವಾರು ಯುವತಿಯರಿಗೆ ಮೋಸ ಮಾಡಿದ್ದಾರೆ. ಹಲವು ನೀಚರು ಜೊತೆಯಲ್ಲಿ ಇದ್ದುಕೊಂಡು ಹಣ ಕಸಿದುಕೊಂಡು, ದೇಹ ಹಂಚಿಕೊಂಡು ಮದುವೆ ಆಗುವುದಾಗಿ ನಂಬಿಸಿ ಕೈ ಕೊಟ್ಟಿದ್ದಾರೆ. ಪೊಲೀಸರಿಗೆ ಹೆದರಲ್ಲ, ಕೇಸ್ ಹಾಕಿದರೂ ಜಗ್ಗಲ್ಲ. ನಾನು ಜೈಲಿಗೆ ಹೋದರೂ ಪರವಾಗಿಲ್ಲ ಮದುವೆ ಆಗಲ್ಲ ಅಂತಾ ಕಿರಾತಕರು ಹೇಳ್ತಿದ್ದಾರೆ. ನಿತ್ಯ ಇಂತಹ ಹತ್ತಾರು ಕೇಸ್ ಗಳು ಮಹಿಳಾ ಆಯೋಗಕ್ಕೆ ದಾಖಲಾಗುತ್ತಿವೆ ಎಂದು ರಾಜ್ಯ ಮಹಿಳಾ ಆಯೋಗದ ರಾಜ್ಯಾಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಬೇಸರ ವ್ಯಕ್ತಪಡಿಸಿದ್ದಾರೆ.