ಬದಲಾದ ಭಾರತ, ಉಜ್ವಲ ಹಿಂದುಸ್ತಾನ, ದಿಟ್ಟ ಆರ್ಥಿಕತೆಯತ್ತ ಹೆಜ್ಜೆಯಿಟ್ಟ ಭರತ ಭೂಮಿ. ಸಾಲು ಸಾಲು ಸವಾಲುಗಳು. ಹತ್ತಾರು ವಲಯಗಳು, ಸಾವಿರಾರು ಜವಾಬ್ದಾರಿಗಳು.
ಹೌದು, ನರೇಂದ್ರ ಮೋದಿ ಸಾರಥ್ಯದ ಎನ್ ಡಿಎ ಸರ್ಕಾರ ಇದೀಗ ತನ್ನ ಸಮರ್ಥ ಒಂದು ವರ್ಷದ ಆಡಳಿತವನ್ನು ಪೂರೈಸಿದೆ. 3ನೇ ಬಾರಿ ಪ್ರಧಾನಿ ಹುದ್ದೆಗೇರೋ ಮೂಲಕ ಮೋದಿ ತಮ್ಮ ನಾಯಕತ್ವದಲ್ಲಿ ಮತ್ತೊಮ್ಮೆ ಮಿಂಚಿದ್ದಾರೆ. ಹಾಗಂತಾ ಈ ಒಂದು ವರ್ಷವನ್ನು ಅವಲೋಕಿಸಿದ್ರೆ, ಅಲ್ಲಿ ನೂರೆಂಟು ಸವಾಲುಗಳಿದ್ವು. ಅವೆಲ್ಲವುಗಳನ್ನು ಮೆಟ್ಟಿ ನಿಂತು ದೇಶವಾಸಿಗಳಿಗೆ ಸುಭದ್ರ ಮತ್ತು ಜನ ಸ್ನೇಹಿ ಆಡಳಿತವನ್ನು ನೀಡಿದ ಹೆಗ್ಗಳಿಕೆ ಮೋದಿಯವರದ್ದು.
ಪಹಲ್ಗಾಮ್ ಪ್ರತೀಕಾರಕ್ಕೆ ಆಪರೇಷನ್ ಸಿಂಧೂರ್
ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ದಾಖಲಾದ ಘಟನೆ ಅಂದ್ರೆ ಅದು ಆಪರೇಷನ್ ಸಿಂಧೂರ್. ಪಹಲ್ಗಾಮ್ ನಲ್ಲಿ 22 ಪ್ರವಾಸಿಗರ ನೆತ್ತರು ಹೀರಿದ್ದ ಉಗ್ರರನ್ನು ಸದೆ ಬಡೆಯೋ ಸಂಕಲ್ಪ ಮಾಡಿದ್ದ ನಮೋ, ಭಯೋತ್ಪಾದನೆಯ ತವರು ಪಾಕಿಸ್ತಾನದೊಳಗೆ ಹೊಕ್ಕು ಉಗ್ರರ ಸಂಹರಿಸಿದ ರೀತಿ ಜಗತ್ತಿಗೇ ಭಾರತದ ಆತ್ಮನಿರ್ಬರತೆಯನ್ನು ಸಾಬೀತು ಮಾಡಿದೆ. ಭಾರತ ಬದಲಾಗಿದೆ, ಕ್ಷಮೆಯಾಧರಿತ್ರಿ ಅಂತಲೇ ಕರೆಯಿಸಿಕೊಳ್ಳುವ ಭಾರತ ಮಾತೆಯೂ ತನ್ನ ಸಿಂಧೂರದ ತಂಟೆಗೆ ಬಂದರೆ ಉಗ್ರ ಕಾಳಿಯ ಅವತಾರ ತಾಳಬಲ್ಲಳು ಅನನುವುದನ್ನು ಮೋದಿ ಸಾಬೀತು ಮಾಡಿದ್ದಾರೆ.

ವಿಶ್ವದಾಖಲೆಯ ಐತಿಹಾಸಿಕ ಕುಂಭಮೇಳ ಆಯೋಜನೆ
12 ವರ್ಷಗಳಿಗೊಮ್ಮೆ ಘಟಿಸುವ ಕುಂಭವೇಳವನ್ನು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸುವ ಮೂಲಕ ನಮೋ ಆಡಳಿತ ಇತಿಹಾಸ ನಿರ್ಮಿಸಿದೆ. ಜನವರಿ 13ರಿಂದ ಫೆಬ್ರವರಿ 26ರವರೆಗೂ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಆಯೋಜಿಸಲಾಗಿದ್ದ ಕುಂಭಮೇಳ ಅತ್ಯಂತ ಯಶಸ್ವೀ ಕಾರ್ಯಕ್ರಮಗಳ ಸಾಲಿನಲ್ಲಿ ಅಗ್ರಗಣ್ಯವಾಗಿ ನಿಲ್ಲುತ್ತಿದೆ. ಅಂದಾಜು 60 ಕೋಟಿಗೂ ಮೀರಿದ ಭಕ್ತರನ್ನು ಸೆಳೆದ ಕುಂಭಮೇಳವನ್ನು ಜಗತ್ತೇ ಮೆಚ್ಚುವಂತೆ ಸಂಘಟಿಸಿದ ಕೀರ್ತಿ ಮೋದಿ ಸರ್ಕಾರದ್ದು.
ಶತಮಾನದ ಬಳಿಕ ದೇಶದಲ್ಲಿ ಜಾತಿ ಗಣತಿ
ಒಂದಲ್ಲಾ, ಎರಡಲ್ಲಾ ಬರೋಬ್ಬರಿ 100 ವರ್ಷಗಳ ಬಳಿಕ ಭಾರತದಲ್ಲೀಗ ಜನಗಣತಿಗೆ ಸಮ್ಮತಿ ನೀಡಲಾಗಿದೆ. ಜಾತಿ ಆಧರಿತ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳ ಮತ್ತು ಆರ್ಥಿಕ ಅಸಮಾನತೆಗಳ ಒಳನೋಟ ಒದಗಿಸುವ ಗುರಿಯೊಂದಿಗೆ ಈ ಗಣತಿ ನಡೆಸಲಾಗುತ್ತಿದೆ. ಅಕ್ಟೋಬರ್ 2026 ಮತ್ತು ಮಾರ್ಚ್ 1 2027ರ ಅವಧಿಯಲ್ಲಿ ಎರಡು ಹಂತದಲ್ಲಿ ದೇಶದಲ್ಲಿ ಈ ಜಾತಿ ಗಣತಿ ನಡೆಯಲಿದೆ. ಈ ಮೂಲಕ ಶಿಕ್ಷಣ ಮತ್ತು ಉದ್ಯೋಗ ರಂಗದಲ್ಲಿ ಹೊಸ ಕ್ರಾಂತಿಯನ್ನು ತರಲು ಮೋದಿ ಸಾರಥ್ಯದ ಆಡಳಿತ ಮುನ್ನುಡಿ ಬರೆದಿದೆ.
ಆಡಳಿತ ಪಾರದರ್ಶಕತೆಗೆ ವಕ್ಫ್ ತಿದ್ದುಪಡಿ ಕಾಯ್ದೆ
ಮುಸಲ್ಮಾನವರ ಆಸ್ತಿಯನ್ನು ನಿರ್ವಹಿಸುವ ವಕ್ಫ್ ಕಾಯ್ದೆಗೆ ಅನೇಕರ ವಿರೋಧದ ನಡುವೆಯೂ ತಿದ್ದುಪಡಿ ತಂದ ಶ್ರೇಯ ಮೋದಿಯವರದ್ದು. ಲಕ್ಷಾಂತರ ಕೋಟಿ ಮೌಲ್ಯದ ಸಂಪತ್ತು ಹೊಂದಿರುವ ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ಸಲುವಾಗಿ 1995ರ ಕಾಯ್ದಗೆ ತಿದ್ದುಪಡಿ ತರಲಾಗಿದೆ. ಈ ಮೂಲಕ ಮಂಡಳಿಗೆ ಮುಸ್ಲಿಮೇತರ ಸದಸ್ಯರ ಸೇರ್ಪಡೆಯಂಥಾ ಮಹತ್ವದ ನಿರ್ಧಾರವನ್ನು ಈ ಬಾರಿಯ ಆಡಳಿತದಲ್ಲಿ ಕೈಗೊಳ್ಳಲಾಗಿದೆ.

ಜಗತ್ತಿನ ನಾಲ್ಕನೇ ಬೃಹತ್ ಆರ್ಥಿಕತೆಯ ಕನಸು
ಭಾರತ ವಿಶ್ವದಲ್ಲೇ 4ನೇ ದೊಡ್ಡ ಆರ್ಥಿಕತೆಯಾಗಿ ಬೆಳೆದು ನಿಂತಿದೆ. ಈ ಮೊದಲು 5ನೇ ಸ್ಥಾನದಲ್ಲಿದ್ದ ದೇಶ, 4 ಟ್ರಿಲಿಯನ್ ಆರ್ಥಿಕತೆ ಸಾಧಿಸುವ ಮೂಲಕ ಜಪಾನ್ ದೇಶವನ್ನು ಹಿಂದಿಕ್ಕಿ ಮುನ್ನುಗ್ಗಿದೆ. ಮೂಲಸೌಕರ್ಯ ಅಭಿವೃದ್ಧಿಗಾಗಿ ಸರ್ಕಾರ ಸುಸ್ಥಿರ ಆರ್ಥಿಕ ಬೆಳವಣಿಗೆ, ಸುಧಾರಣೆ, ಮೂಲಸೌಕರ್ಯ ಅಭಿವೃದ್ಧಿ, ಡಿಜಿಟಲೀಕರಣ, ರಫ್ತಿಗೆ ಆದ್ಯತೆ ಹಾಗೂ ಉತ್ತೇಜನದಂಥಾ ಕ್ರಮಗಳನ್ನು ಕೈಗೊಂಡಿದ್ದು ಅದರಲ್ಲಿ ಯಸಸ್ಸನ್ನೂ ಕಂಡಿದೆ.
ದೆಹಲಿ, ಮಹಾರಾಷ್ಟ್ರ, ಹರ್ಯಾಣ ಚುನಾವಣೆ ಗೆಲುವು
ಕೇಂದ್ರದ ಜನಸ್ನೇಹಿ ಆಡಳಿತ, ಮೋದಿಯವರ ವರ್ಚಸ್ಸಿನಿಂದ ಈ ವರ್ಷದ ಆರಂಭದಲ್ಲಿ ನಡೆದ ಚುನಾವಣೆಗಳಲ್ಲಿ ಎನ್ ಡಿಎ ಮೈತ್ರಿಕೂಟ ಅಮೋಘ ಜಯ ದಾಖಲಿಸಿದೆ. 2 ದಶಕಗಳ ಬಳಿಕ ದೆಹಲಿಯಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರದ ಸಿಂಹಾಸನ ಅಲಂಕರಿಸಿದೆ. ಮಹಾರಾಷ್ಟ್ರದಲ್ಲೂ ಮಹಾಯುತಿ ಮೈತ್ರಿ ಆಡಳಿತ ಚುಕ್ಕಾಣಿ ಹಿಡಿದೆ. ಇತ್ತ ಹರ್ಯಾಣದಲ್ಲೂ ತನ್ನ ಎರಡನೇ ಅವಧಿ ಆಡಳಿತವನ್ನು ಮುಂದುವರಿಸಿದೆ.
ಸಾಕಾರತೆಯತ್ತ ಒಂದು ದೇಶ, ಒಂದು ಚುನಾನವಣೆ ಸಂಕಲ್ಪ
ದೇಶದ ಆರ್ಥಿಕತೆಗೆ ದೊಡ್ಡ ಹೊಡೆತ ನೀಡುತ್ತಿರುವ ಚುನಾವಣೆ ವೆಚ್ಚವನ್ನು ತಗ್ಗಿಸುವ ನಿಟ್ಟಿನಲ್ಲಿ ಮಹೋನ್ನತ ನಿರ್ಧಾರ ಕೈಗೊಳ್ಳಲಾಗಿದೆ. ದೇಶದಲ್ಲಿ ಒಂದೇ ಬಾರಿ ಚುನಾವಣೆ ನಡೆಸೋ ಒಂದು ದೇಶ ಒಂದು ಚುನಾವಣೆ ಕನಸನ್ನು ನನಸಾಗಿಸುವತ್ತ ಮೋದಿ ಸರ್ಕಾರ ಹೆಜ್ಜೆ ಇಟ್ಟಿದೆ. ಈ ಯೋಜನೆ ಸಾಧಕ ಬಾಧಕಗಳ ಅಧ್ಯಯನಕ್ಕೆಂದು ಜಂಟಿ ಸಂಸದೀಯ ಸಮಿತಿ ರಚಿಸಲಾಗಿದೆ. ಈ ಸಮಿತಿ ದೇಶದ ವಿವಿಧ ಭಾಗಗಳಿಗೆ ತೆರಳಿ ಅಧ್ಯಯನ ನಡೆಸಿ ವರದಿ ಸಲ್ಲಿಸಲಿದೆ. ಈ ಮೂಲಕ ಮೂರನೇ ಅವಧಿಯ ಮೊದಲ ವರ್ಷವೇ ನಮೋ ಸರ್ಕಾರ ಐತಿಹಾಸಕ ಸಾಧನೆ ಮಾಡಿದೆ. ಈ ಮೂಲಕ ದೇಶವಾಸಿಗಳಿಗೆ ಶಕ್ತ ಆಡಳಿತದ ಭರವಸೆಯನ್ನು ಮೋದಿ ಮೂಡಿಸಿದ್ದಾರೆ.