ಎರಡನೇ ವರ್ಷದ ಪಿಯುಸಿಗೆ ಪ್ರವೇಶ ಪಡೆಯಲು ಟಿಸಿ ತರಲು ಹೋಗಿದ್ದ 17 ವರ್ಷದ ಶಿವಲಿಂಗ ಇದೀಗ ನೆನಪು ಮಾತ್ರ. ಆರ್ ಸಿಬಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದ ಶಿವಲಿಂಗ ಕಾಲ್ತುಳಿತಕ್ಕೆ ಪ್ರಾಣತೆತ್ತಿದ್ದಾನೆ.
ಮೂಲತ: ಯಲಹಂಕದ ರಾಮಸಂದ್ರದವರಾಗಿರುವ ಶಿವಲಿಂಗ ಓದಲೆಂದೇ ಬೆಂಗಳೂರಿಗೆ ಬಂದಿದ್ದ. ಯಲಹಂಕದ ಸರ್ಕಾರಿ ಶಾಲೆಯಲ್ಲಿ ಓದಿದ್ದ ಶಿವಲಿಂಗ ನಿನ್ನೆ ಟಿಸಿ ತರಲೆಂದು ಹೋಗಿದ್ದ. ಈ ವೇಳೆ ಸ್ನೇಹಿತರು ಕರೆದರು ಅಂತಾ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಿದ್ದ. ಆದರೆ, ದುರ್ವಿಧಿ ಕಾಲ್ತುಳಿತ ರೂಪದಲ್ಲಿ ಎದುರಾಗಿತ್ತು. ಶಿವಲಿಂಗನ ಪೋಷಕರು ಕೂಲಿ ಮಾಡಿ ಮಗನ ಉತ್ತಮ ಭವಿಷ್ಯ ರೂಪಿಸುವ ಕನಸು ಕಂಡಿದ್ದರು. ಆದರೀಗ ಆ ಕನಸೇ ನುಚ್ಚು ನೂರಾಗಿದೆ.