ಆರ್ಸಿಬಿ ಟೀಂ ಫೈನಲ್ನಲ್ಲಿ ಕಪ್ ಜಯಿಸಿದರೆ ಅಭಿಮಾನಿಯೊಬ್ಬ ಸ್ಪೆಷಲ್ ಆಫರ್ ಘೋಷಿಸಿದ್ದಾನೆ. ಅಭಿಮಾನಿಗಳಿಗೆ ಉಚಿತವಾಗಿ ವಡಾಪಾವ್ ವಿತರಿಸ್ತೀನಿ ಅಂತಾ ಅಭಿಮಾನ ಮೆರೆದಿದ್ದಾನೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಮಹಾಲಕ್ಷ್ಮೀ ಸೆಂಟರ್ ಮಾಲೀಕ ಅರುಣ ಶಿತೋಳಿ ಇಂಥದ್ದೊಂದು ಫ್ರೀ ಆಫರ್ ಡಿಕ್ಲೇರ್ ಮಾಡಿದ್ದಾನೆ. RCB ಫೈನಲ್ನಲ್ಲಿ ಕಪ್ ಗೆದ್ದರೆ ನಾಳೆ ವಡಾಪಾವ್ ಉಚಿತವಾಗಿ ಹಂಚುತ್ತೀನಿ ಎಂದಿದ್ದಾನೆ. 18 ವರ್ಷಗಳ ಬಳಿಕ ಕನಸು ನನಸಾಗುವ ಘಳಿಗೆ ಸಮೀಪಿಸಿದೆ.
ಆರ್ಸಿಬಿ ತಂಡ ಕಪ್ ಗೆದ್ದು ಚರಿತ್ರೆ ಸೃಷ್ಟಿಸಿದರೆ ಬಿಂದಾಸ್ ಆಗಿ ನಿರ್ಮಲ ಮನಸ್ಸಿನಿಂದ ವಡಾಪಾವ್ ವಿತರಿಸ್ತೀನಿ ಅಂತಾ ಅರುಣ ಅಭಿಮಾನದಿಂದ ಹೇಳಿದ್ದಾನೆ.