ಜೈಶ್ ಎ ಮೊಹಮದ್ ಸಂಘಟನೆಯ ಬೆನ್ನೆಲುಬನ್ನೇ ನಿನ್ನೆಯ ಆಪರೇಷನ್ ಸಿಂಧೂರ್ ಚಿಂದು ಉಡಾಯಿಸಿದೆ.
ಭಾರತದ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿದ್ದ ಅಬ್ದುಲ್ ರೌಫ್ ಅಜರ್ ಭಾರತದ ದಾಳಿಕೆ ಸುಟ್ಟು ಬೂದಿಯಾಗಿದ್ದಾನೆ.
ಈ ರೌಫ್ ಬೇರಾರು ಅಲ್ಲ ಜೈಶ್ ಸಂಘಟನೆ ಸಂಸ್ಥಾಪಕ ಮಸೂದ್ ಅಜರ್ ನ ಸಹೋದರ. ಅಷ್ಟೇ ಅಲ್ಲಾ ಜೈಶ್ ನ ಸುಪ್ರೀಂ ಕಮಾಂಡರ್ ಕೂಡಾ ಆಗಿದ್ದ. ನಿನ್ನೆ ಭಾವಲ್ಪುರದ ಮರ್ಕಜ್ ನ ಸುಭಾನ್ ಅಲ್ಹಾ ಮಸೀದಿ ಮೇಲೆ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಮಸೂದ್ ಅಜರ್ ನ ಅಕ್ಕ, ಭಾವ ಸೇರಿದಂತೆ ಮಕ್ಕಳು ಪ್ರಾಣಬಿಟ್ಟಿದ್ದರು. ಅಷ್ಟೇ ಅಲ್ಲಾ ಮಸೀದಿಯಲ್ಲೇ ಇದ್ದ ಅತ್ಯುಗ್ರ ಅಬ್ದುಲ್ ರೌಫ್ ಕೂಡಾ ಹತನಾಗಿದ್ದಾನೆ.
ಕೇವಲ 24 ವರ್ಷದವನಾಗಿದ್ದ ರೌಫ್ 1999ರಲ್ಲಿ ನಡೆದಿದ್ದ ಕಂದಹಾರ್ ವಿಮಾನ ಅಪಹರಣದ ಮಾಸ್ಟರ್ ಮೈಂಡ್ ಆಗಿದ್ದ. ಐಸಿ-814 ವಿಮಾನ ಅಪಹರಣದ ಸೂತ್ರಧಾರನಾಗಿದ್ದ ರೌಫ್, ಅಂದು ಒತ್ತೆಯಾಳು ಪ್ರಯಾಣಿಕರ ಬದಲು ಇದೇ ಮಸೂದ್ ಅಜರ್ ನನ್ನು ಭಾರತದ ಬಂಧನದಿಂದ ಮುಕ್ತಗೊಳಿಸಿ ಕರೆದೊಯ್ದಿದ್ದ. ಅದೇ ರೌಫ್ ಇಂದು ಭಾರತದ ಡೆಡ್ಲಿ ದಾಳಿಗೆ ಸುಟ್ಟು ಬೂದಿಯಾಗಿದ್ದಾನೆ.