ಬೆಂಗಳೂರು: ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸೇರಿದಂತೆ ಹಲವು ಸಂಗೀತ ನಿರ್ದೇಶಕರಿಗೆ ಕನ್ನಡಪರ ಸಂಘಟನೆಯ ಕಾರ್ಯಕರ್ತರು ವಾರ್ನಿಂಗ್ ಮಾಡಿದ್ದಾರೆ.
ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ವಾರ್ನಿಂಗ್ ನೀಡಿದ್ದಾರೆ. ಸೋನು ನಿಗಮ್ ಅವಿವೇಕಿ. ದುರಹಂಕಾರಿ. ಆತನ ಮೂಸಿ ಕೂಡಾ ನೋಡ್ತಾ ಇಲ್ಲ. ನಮ್ಮ ಕನ್ನಡಿಗರು ಭಯೋತ್ಪಾದಕರು ಅಂತ ಹೇಳಿಕೆ ಕೊಟ್ಟಿದ್ದಾನೆ. ಆ ಮೂರ್ಖನನ್ನು ಕನ್ನಡ ಚಲನಚಿತ್ರ ರಂಗದಿಂದ ಬ್ಯಾನ್ ಮಾಡಬೇಕು. ಯಾವುದೇ ಚಲನಚಿತ್ರ ತಂಡದವರು ಆತನನ್ನು ಕರೆಯಿಸಿ ಹಾಡು ಹೇಳಿಸಿದರೆ, ಆ ಸಿನಿಮಾ ಬಿಡುಗಡೆ ಮಾಡಲು ಬಿಡುವುದಿಲ್ಲ. ಸೋನು ನಿಗಮ್ ಕನ್ನಡ ಚಲನಚಿತ್ರ ಹಾಡು ಹೇಳಿದ್ರೆ ವಾಣಿಜ್ಯ ಮಂಡಳಿ ನೇರ ಹೊಣೆ ಆಗುತ್ತದೆ ಎಂದು ಗುಡುಗಿದ್ದಾರೆ.
ಯಾವುದೇ ಕಾರಣಕ್ಕೂ ಇಂತಹ ಅವಿವೇಕಿ ಅವಕಾಶ ಕೊಡಬಾರದು. ಆತನಿಗೆ ನೇಮ್ ಫೆಮ್ ಬಂದಿರುವುದು ಕರ್ನಾಟಕದಲ್ಲಿ. ಆತನನ್ನು ಕರೆಯಿಸಿ ಕಾರ್ಯಕ್ರಮ ಮಾಡುವ ಖಾಸಗಿಯವರಿಗೆ ನಾಚಿಕೆ ಆಗಬೇಕು. ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕನ್ನಡಿಗರ ಟಾರ್ಗೆಟ್ ಮಾಡ್ತುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾಸಗಿ ಕಂಪನಿ, ಶೈಕ್ಷಣಿಕ ಸಂಸ್ಥೆಗಳು ಸೋನು ನಿಗಮ್ ಅವರನ್ನು ಕರೆಯಿಸಿದರೆ, ನಾವು ಅವಕಾಶ ನೀಡುವುದಿಲ್ಲ ಎಂದು ಗುಡುಗಿದ್ದಾರೆ.