ಸ್ವಚ್ಛಂದ ಪರಿಸರದಲ್ಲಿ ಮನಸ್ಸು ಮರೆತು ತೇಲಾಡ್ತಿದ್ದವರ ಎದೆಗೆ ಗುಂಡು ನುಗ್ಗಿಸಲಾಗಿದೆ. ಪುಟ್ಟ ಕಂದಮ್ಮಗಳ ಮುಂದೆಯೇ ಆತನ ತಂದೆಯನ್ನು ನಿರ್ದಯವಾಗಿ ಹತ್ಯೆ ಮಾಡಲಾಗಿದೆ. ಪತ್ನಿಯ ಮುಂದೆಯೇ ಪತಿಯನ್ನು ರಕ್ತದ ಮಡುವಿನಲ್ಲಿ ಬೀಳಿಸಲಾಗಿದೆ. 26 ಪ್ರವಾಸಿಗರ ನರಮೇಧದ ಪ್ರತೀಕಾರದ ಒಂದೊಂದು ಹೆಜ್ಜೆಯೂ ಚಾರಿತ್ರಿಕವಾಗಿರಬೇಕು ಎನ್ನುವುದು ಪ್ರತಿ ಭಾರತೀಯನ ಆಶಯ.
ಇತ್ತ ಪ್ರಧಾನಿ ಮೋದಿ ಕೂಡಾ ಸೇನೆಗೆ ಫ್ರೀ ಹ್ಯಾಂಡ್ ನೀಡಿದ್ದು, ಭಾರತದ ಪ್ರತೀಕಾರದಕ್ಕೆ ಸುಟ್ಟು ಭಸ್ಮವಾಗೋದು ಯಾರೆಲ್ಲಾ ಅನ್ನೋ ದೊಡ್ಡ ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ. ನಮೋ ಬ್ರಿಗೇಡ್ ನ ಟಾರ್ಗೆಟ್ ಏನೆಲ್ಲಾ ಆಗಬಹುದು…ಯೆಸ್ ಈ ಎಲ್ಲ ಪ್ರಶ್ನೆಗಳಿಗಿವತ್ತು ಒಂದು ತಾರ್ಕಿಕ ಅರ್ಥ ಕಂಡುಕೊಳ್ಳೋಣ.
ಮೋದಿ ಬತ್ತಳಿಕೆಯಲ್ಲಿ ಐದು ಬ್ರಹ್ಮಾಸ್ತ್ರ
ಪಹಲ್ಗಾಮ್ ದಾಳಿಯ ಸೇಡಿಗಾಗಿ ಕುದಿಯುತ್ತಿರೋ ಪ್ರತಿ ಹೃದಯದಲ್ಲೂ ಮುಂದೇನು ಎನ್ನುವುದಿದೆ. ಪ್ರಧಾನಿ ಮೋದಿ ನಿನ್ನೆ ಇಡೀ ದಿನ ಸಾಲು ಸಾಲು ಹೈವೋಲ್ಟೇಜ್ ಮೀಟಿಂಗ್ ಗಳನ್ನು ಮಾಡಿದ್ದಾರೆ. ಹತ್ತಾರು ಅನುಭವಿಗಳಿಗೆ ನಿರ್ಣಾಯಕ ಪಾತ್ರ ನೀಡಿದ್ದಾರೆ. ಇದರರ್ಥ ಸ್ಕೆಚ್ ರೆಡಿಯಾಗಿದೆ ಅಂತಲೇ ಅಲ್ವಾ. ಭಾರತದ ಬತ್ತಳಿಕೆಯಲ್ಲಿ ಐದು ಬ್ರಹ್ಮಾಸ್ತ್ರಗಳಿವೆ. ಇವುಗಳ ಪೈಕೆ ಮೊದಲ ಟಾರ್ಗೆಟ್ ಯಾವ್ದು ಅನ್ನೋದಿನ್ನೂ ನಿಗೂಢ.
ಪಾಕಿಸ್ತಾನದ ಸೇನಾ ಕೇಂದ್ರ ಕಚೇರಿ ಬ್ಲ್ಯಾಸ್ಟ್
ಭಾರತದ ಟಾರ್ಗೆಟ್ ನಂಬರ್ ಓನ್, ಬೇರೆಯಾವುದೂ ಅಲ್ಲ. ಅದು ಪಾಕಿಸ್ತಾನದ ಸೇನಾ ಕೇಂದ್ರ ಕಚೇರಿ. ಇಸ್ಲಾಮಾಬಾದ್ ನಲ್ಲಿರುವ ಪಾಕ್ ಸೇನೆಯ ಕೇಂದ್ರ ಕಚೇರಿಯನ್ನೇ ಸರ್ವನಾಶ ಮಾಡುವ ಐಡಿಯಾ ಭಾರತಕ್ಕಿದೆ. ಅದರ ಹಿಂದೆ ಪ್ರತೀಕಾರದ ಜ್ವಾಲೆಯಿದೆ. 2019ರ ಪುಲ್ವಾಮಾ ದಾಳಿಯಲ್ಲಿ 40 ಸಿಆರ್ ಪಿಎಫ್ ಯೋಧರು ಪ್ರಾಣತೆತ್ತಿದ್ದರು. ಇದರ ಹಿಂದಿನ ಮಾಸ್ಟರ್ ಮೈಂಡ್ ಅಸೀಂ ಮುನೀರ್. ದಾಳಿ ನಡೆದಾಗ ಐಎಸ್ಐ ಮಖ್ಯಸ್ಥನಾಗಿದ್ದ ಅಸೀಂ ಅವತ್ತು ದಾಳಿಯ ಸಂಪೂರ್ಣ ಹೊಣೆಗಾರಿಕೆ ನಿಭಾಯಿಸಿದ್ದ. ಇವತ್ತು ಪಾಕ್ ಸೇನಾ ಮುಖ್ಯಸ್ಥನಾಗಿರೋ ಮುನೀರ್ ನನ್ನೇ ಟಾರ್ಗೆಟ್ ಮಾಡಿ ಸಮಸ್ತ ಸೇನಾ ಕೇಂದ್ರ ಕಚೇರಿಯನ್ನೇ ಉಡಾಯಿಸೋ ಲೆಕ್ಕಾಚಾರ ನಡೆದಿದೆ.
ಹಫೀಜ್ ಸಯೀದ್ ಮತ್ತು ಲಷ್ಕರ್ ಕೇಂದ್ರ ಕಚೇರಿ
2019ರ ಮುಂಬೈ ದಾಳಿಯ ರುವಾರಿ ಹಫೀಜ್ ಸಯೀದ್ ಭಾರತದ ಎರಡನೇ ಟಾರ್ಗೆಟ್. ಭಾರತದ ವಾಣಿಜ್ಯ ನಗರಿ ಮುಂಬೈನಲ್ಲಿ ರಕ್ತಕೇಕೆ ಹಾಕಿದ್ದ ಹಫೀಜ್, ಇವತ್ತಿಗೆ ಮೋಸ್ಟ್ ವಾಂಟೆಡ್ ಉಗ್ರ. ಪಾಕಿಸ್ಥಾನದ ಲಾಹೋರ್ ನಲ್ಲಿ ಬಿಂದಾಸ್ ಜೀವನ ನಡೆಸಿರುವ ಉಗ್ರನನ್ನ ಟಾರ್ಗೆಟ್ ಮಾಡಿ ಉಡಾಯಿಸೋ ಇರಾದ ಭಾರತಕ್ಕಿದೆ. ಅಷ್ಟೇ ಅಲ್ಲಾ ಹಫೀಜ್ ನ ಲಷ್ಕರ್ ಎ ತೋಯ್ಬಾ ಸಂಘಟನೆಯ ಕಚೇರಿ, ಅಡಗುದಾಣಗಳನ್ನೂ ಚಿಂದಿ ಉಡಾಯಿಸೋ ಪ್ಲ್ಯಾನ್ ಇದೆ.
ಪಿಒಕೆಗೆ ನುಗ್ಗಿ ಲಾಂಚ್ ಪ್ಯಾಡ್ ಧ್ವಂಸ
ಕಾಶ್ಮೀರ ಸೇರಿದಂತೆ ಭಾರತದಲ್ಲಿ ಉಗ್ರವಾದ ಕೃತ್ಯಗಳ ತವರು ಅಂದ್ರೆ ಅದು ಪಾಕ್ ಆಕ್ರಮಿತ ಕಾಶ್ಮೀರ. ಈ ಪಿಒಕೆಯಲ್ಲೇ ದಶಕಗಳಿಂದ ಬೀಡು ಬಿಟ್ಟಿರುವ ಉಗ್ರ ಸಂಘಟನೆಗಳನ್ನು ಸರ್ವನಾಶ ಮಾಡುವ ಇರಾದೆ ಕೂಡ ಭಾರತಕ್ಕಿದೆ. ಈ ಪಿಒಕೆಯಲ್ಲೇ 17ಕ್ಕೂ ಹೆಚ್ಚು ಉಗ್ರರ ತರಬೇತಿ ಶಿಬಿರಗಳಿವೆ. ಅಷ್ಟೇ ಅಲ್ಲಾ ಕ್ಷಿಪಣಿ ದಾಳಿಗೆ ಅನುವಾಗುವಂಥಾ 37ಕ್ಕೂ ಹೆಚ್ಚು ಲಾಂಚ್ ಪ್ಯಾಡ್ ಗಳಿವೆ. ಭಾರತ ಇವುಗಳನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡೋದು ಮತ್ತು ಕೈತಪ್ಪಿರೋ ಕಾಶ್ಮೀರದ ಅವಿಭಾಜ್ಯ ಅಂಗವನ್ನು ಮರಳಿ ಪಡೆಯೋ ಚಿಂತನೆ ಕೂಡಾ ಇದೆ.
ಪಾಕಿಸ್ತಾನದ ಐಎಸ್ಐ ಕೇಂದ್ರ ಕಚೇರಿ ಉಡೀಸ್
ಟಾರ್ಗೆಟ್ ನಂಬರ್ ನಾಲ್ಕು ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ ಐ ಕೇಂದ್ರ ಕಚೇರಿ. ಉಗ್ರವಾದಕ್ಕೆ ಬೆನ್ನುಲುಬಾಗಿ ನಿಂತಿರುವ ಐಎಸ್ಐ ಕೇಂದ್ರ ಕಚೇರಿ ಇಸ್ಲಾಮಾಬಾದ್ ನಲ್ಲಿದೆ. ದಶಕಗಳಿಂದಲೂ ಉಗ್ರರಿಗೆ ಆರ್ಥಿಕ ನೆರವು ನೀಡಿ ಶಸ್ತ್ರಾಸ್ತ್ರ ಪೂರೈಸುತ್ತಾ ಭಾರತದ ವಿರುದ್ಧ ಮಚ್ಚು ಮಸೆಯುತ್ತಿರೋ ಐಎಸ್ ಐಯನ್ನೇ ನಿರ್ನಾಮ ಮಾಡುವ ಸಂಚನ್ನೂ ಭಾರತ ರೂಪಿಸಿದೆ.
ಜೈಶ್ ಸಂಘಟನೆ ಸರ್ವನಾಶ-ಮಸೂದ್ ಅಜರ್ ಗೆ ಮುಹೂರ್ತ
ಅಂತಿಮವಾಗಿ ಟಾರ್ಗೆಟ್ ನಂಬರ್ ಐದು…2019ರ ಪುಲ್ವಾಮಾ ದಾಳಿಯ ಹರಿಕಾರ ಮಸೂದ್ ಅಜರ್ ನ್ನು ಬೇಟೆಯೋದು. ಪಾಕಿಸ್ತಾನದಲ್ಲಿ ಅಡಗಿ ಕೂತಿರುವ ಜೈಶ್ ಎ ಮೊಹಮ್ಮದ್ ಸಂಘಟನೆಯ ಸಂಘಟಕ ಮಸೂದ್ ಅಜರ್ ನ್ನು ಟಾರ್ಗೆಟ್ ಮಾಡಿ ದಾಳಿ ಮಾಡಿ ಆತನ ಸಂಪೂರ್ಣ ಸಂಘಟನೆಗೆ ಸಮಾಧಿ ಕಟ್ಟುವ ದೊಡ್ಡ ಲೆಕ್ಕಾಚಾರವನ್ನು ಸೇನೆ ಮಾಡ್ತಿದೆ. ಆದ್ರೆ ಪಹಲ್ಗಾಮ್ ದಾಳಿ ಬಳಿಕ ಪಾಕ್ ಪತರಗುಟ್ಟಿರೋದು ನಿಜ. ಈಗಾಗಲೇ ಮೂರನೇ ಕಣ್ಣು ಬಿಟ್ಟಿರುವ ಭಾರತದ ದೃಷ್ಟಿಯಲ್ಲಿ ಯಾರಿದ್ದಾರೆ, ಮೊದಲು ಖತಂ ಆಗೋರು ಯಾರು ಅನ್ನೋದಕ್ಕೆ ಕಾಲವೇ ಉತ್ತರಿಸಲಿದೆ.