ಚಿತ್ರದುರ್ಗ:ಮಹಿಳೆಯೊಬ್ಬರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಜಿಲ್ಲೆಯ ಹೊಳಕ್ಲೆಕೆ ತಾಲೂಕಿನ ರಾಮಘಟ್ಟ ಗ್ರಾಮದ ಆಶಾ(28 ) ಎಂಬುವವರನ್ನು ಕೊಲೆ ಮಾಡಿ ಮಂಜುನಾಥ್ ಪರಾರಿಯಾಗಿದ್ದ. ಕೊಡಗವಳ್ಳಿಹಟ್ಟಿ ಗ್ರಾಮದ ಆರೋಪಿ ಮಂಜುನಾಥ ಕೊಲೆ ಮಾಡಿ ಪರಾರಿಯಾಗಿದ್ದ. ಕೊಲೆ ಮಾಡಿದ್ದ ಆರೋಪಿ ಮಂಜುನಾಥ್, ಆಶಾ ಜತೆ ಅಕ್ರಮ ಸಂಬಂಧ ಹೊಂದಿ, ಸಾಲ ಪಡೆದಿದ್ದ ಎನ್ನಲಾಗಿದೆ.
ಆದರೆ, ಆಶಾ ಕೊಟ್ಟ ಸಾಲಕ್ಕಿಂತ ಹೆಚ್ಚಿನ ಹಣ ಕೇಳಿದ್ದಕ್ಕೆ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಆರೋಪಿ ಬಂಧಿಸುವುದಕ್ಕಾಗಿ 3 ತಂಡಗಳನ್ನು ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರು ರಚಿಸಿದ್ದರು. ಈ ಕುರಿತು ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.