ರಾಜ್ಯ ಸರ್ಕಾರ ಭಾಗ್ಯಗಳ ಹೆಸರಲ್ಲಿ ಜನರನ್ನು ಯಾಮಾರಿಸುವ ಕೆಲಸ ಮಾಡುತ್ತಿದೆ. ಉಸಿರಾಡುವ ಗಾಳಿಯೊಂದನ್ನ ಬಿಟ್ಟು ಉಳಿದಲ್ಲವುಗಳಿಗೂ ದರ ನಿಗದಿ ಮಾಡಲಾಗುತ್ತಿದೆ ಎಂದು ಮಾಜಿ ಸಂಸದೆ ಹಾಗೂ ಹಿರಿಯ ನಟಿ ಸುಮಲತಾ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಸ್ಥಿತಿ ಹೀಗೆ ಮುಂದುವರೆದರೆ ಸಾಮಾನ್ಯರ ಜೀವನ ದುಸ್ಥರವಾಗಲಿದೆ. ರಾಜ್ಯ ಸರ್ಕಾರದ ಈ ಬೆಲೆ ಏರಿಕೆ ಧೋರಣೆಯನ್ನು ಖಂಡಿಸಿಯೇ ಬಿಜೆಪಿ ಜನಾಕ್ರೋಶ ಹೋರಾಟ ನಡೆಸಿದೆ ಎಂದಿದ್ದಾರೆ.
ಇದೇ ವೇಳೆ ಕೇಂದ್ರದ ದರ ಏರಿಕೆ ನಿಲುವನ್ನು ಸಮರ್ಥಿಸಿಕೊಂಡ ಸುಮಲತಾ, ತೈಲ ಹಾಗೂ ಗ್ಯಾಸ್ ನ ದರಗಳು ಜಾಗತಿಕ ಮಾರುಕಟ್ಟೆಗೆ ಅನುಗುಣವಾಗಿ ಬದಲಾಗುತ್ತವೆ. ಹಾಗಂತಾ ಅದರ ಮೇಲೆ ಮತ್ತೆ ರಾಜ್ಯ ಸರ್ಕಾರಗಳು ತೆರಿಗೆ ವಿಧಿಸುವುದು ಸೂಕ್ತವಲ್ಲ.
ಇದೇ ವೇಳೆ ಮಹಿಳೆಯರ ಮೇಲಿನ ದೌರ್ಜನ್ಯ ಕುರಿತ ಗೃಹ ಸಚಿವ ಪರಮೇಶ್ವರ್ ರವರ ಬೇಜಾವಾಬ್ದಾರಿ ಹೇಳಿಕೆ ವಿಷಾದನೀಯ. ಜವಾಬ್ದಾರಿಯುತ ಹುದ್ದೆಯಲ್ಲಿದ್ದವರ ಈ ಉಡಾಫೆ ಗೌರವ ಸಮರ್ಪಕವಲ್ಲ ಎಂದಿದ್ದಾರೆ.