ಹೈದರಾಬಾದ್: ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ ಪುತ್ರ ಅಗ್ನಿ ಅವಘಡಕ್ಕೆ ಸಿಲುಕಿರುವ ಘಟನೆ ನಡೆದಿದೆ.
ಸಿಂಗಪುರದಲ್ಲಿ ಓದುತ್ತಿರುವ ಮಾರ್ಕ್ ಶಂಕರ್ ಸೋಮವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದಾರೆ. ತಾವು ಓದುತ್ತಿರುವ ಶಾಲೆಯಲ್ಲೇ ಈ ಪ್ರಮಾದ ನಡೆದಿದ್ದು, ಪ್ರಾಣಾಪಾಯದಿಂದ ಮಾರ್ಕ್ ಶಂಕರ್ ಪಾರಾಗಿದ್ದಾರೆ. ದಿಢೀರ್ ಹೊತ್ತಿಕೊಂಡ ಬೆಂಕಿಯಿಂದಾಗಿ ಈ ಅವಘಡ ನಡೆದಿದ್ದು, ಪವನ್ ಪುತ್ರನ ಕೈ ಹಾಗೂ ಕಾಲಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ ಎನ್ನಲಾಗಿದೆ.
ಸದ್ಯ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದೆ. ಎಎಸ್ ಆರ್ ಜಿಲ್ಲಾ ಪ್ರವಾಸದಲ್ಲಿರುವ ಪವರ್ ಸ್ಟಾರ್ ಮಧ್ಯಾಹ್ನ ಸಿಂಗಾಪುರಕ್ಕೆ ತೆರಳುವ ಸಾಧ್ಯತೆಗಳಿವೆ. ಈಗಾಗಲೇ ವೈದ್ಯರಿಂದ ಮಾಹಿತಿ ಸಂಗ್ರಹಿಸಿರುವ ಪವನ್, ಮಗನ ಆರೋಗ್ಯ ವಿಚಾರಿಸಲು ಸಿಂಗಾಪುರಕ್ಕೆ ಹಾರುವ ಸಾಧ್ಯತೆಗಳಿವೆ. ಇದಕ್ಕೆ ಸಾಕ್ಷಿ ಎನ್ನುವಂತೆ ಇಂದಿನ ತಮ್ಮ ಎಲ್ಲ ಸರ್ಕಾರ ಕಾರ್ಯಕ್ರಮಗಳನ್ನು ಪವನ್ ರದ್ದುಗೊಳಿಸಿದ್ದಾರೆ.