ಬೆಂಗಳೂರು: ನಟಿ ರನ್ಯಾ ರಾವ್ ಗ್ಲೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನಟಿಯನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಈ ಮಧ್ಯೆ ಡಿಆರ್ ಐ ಅಧಿಕಾರಿಗಳು ಕಸ್ಟಡಿಗೆ ಯಾವ ಕಾರಣಕ್ಕೆ ಪಡೆಯಲಿಲ್ಲ ಎಂಬ ಚರ್ಚೆ ಶುರುವಾಗಿದೆ.
ಹಾಗಾದರೆ, ರಿಮ್ಯಾಂಡ್ ಆಪ್ಲಿಕೇಷನ್ ನಲ್ಲಿ ಅಧಿಕಾರಿಗಳು ಕೊಟ್ಟ ಕಾರಣ ಏನು? ರಿಮ್ಯಾಂಡ್ ಅಪ್ಲಿಕೇಶನ್ ನಲ್ಲಿ ಸಲ್ಲಿಕೆಯಾಗಿರುವ ಅಂಶಗಳೇನು? ಎಂಬ ಮಾಹಿತಿ ಕರ್ನಾಟಕ ನ್ಯೂಸ್ ಬೀಟ್ ಗೆ ಲಭ್ಯವಾಗಿದೆ.
ರಿಮ್ಯಾಂಡ್ ಅಪ್ಲಿಕೇಷನ್ ಪ್ರಮುಖ ಅಂಶಗಳು:
ಆರೋಪಿ ರನ್ಯಾ ರಾವ್ ತನಿಖೆಗೆ ಸಹಕರಿಸಿಲ್ಲ.
ಏಜೆನ್ಸಿಯ ತನಿಖೆಗೆ ಅಸಹಕಾರ ತೋರಿದ ರನ್ಯಾ.
(ಆದರೆ ಇದಕ್ಕೆ ಪ್ರತಿಯಾಗಿ ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದಾಗಿ ಕೋರ್ಟ್ ನಲ್ಲಿ ರನ್ಯಾ ಹೇಳಿಕೆ)
ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇರುತ್ತದೆ.
ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ.
ಹೀಗಾಗಿ ಎ1 ಆರೋಪಿ ರನ್ಯಾಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಮನವಿ ಮಾಡಲಾಯಿತು.
ಡಿಆರ್ ಐ ಅಧಿಕಾರಿಗಳ ರಿಮ್ಯಾಂಡ್ ಅಪ್ಲಿಕೇಷನ್ ಪುರಸ್ಕರಿಸಿದ ಕೋರ್ಟ್, 15 ದಿನಗಳ ಕಾಲ ರನ್ಯಾಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಇನ್ನೊಂದೆಡೆ ರನ್ಯಾ ರಾವ್ ಆಪ್ತ ಸ್ನೇಹಿತ ತರುಣ್ ರಾಜ್ ಅರೆಸ್ಟ್ ಆಗಿದ್ದು, ರನ್ಯಾಗೆ ಟೆನ್ಶನ್ ಶುರುವಾಗಿದೆ. ತರುಣ್ ರಾಜ್ ಕಸ್ಟಡಿ ಬೆನ್ನಲ್ಲೇ ರನ್ಯಾಗೆ ಢವ ಢವ ಶುರುವಾಗಿದೆ. ತರುಣ್ ರಾಜ್, ಗೋಲ್ಡ್ ಸ್ಮಗ್ಲಿಂಗ್, ದುಬೈ ಟೂರ್, ಹಣಕಾಸು ವಿಚಾರದ ಬಗ್ಗೆ ಬಾಯಿ ಬಿಟ್ಟರೆ ರನ್ಯಾಗೆ ಕಂಟಕವಾಗಲಿದೆ.
ತರುಣ್ ರಾಜ್ ನನ್ನು ಅಧಿಕಾರಿಗಳು ಐದು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ. ಈ ವೇಳೆ ಅಧಿಕಾರಿಗಳು ಏನನ್ನು ಬಾಯಿ ಬಿಡಿಸುತ್ತಾರೆ? ಎಂಬುವುದನ್ನು ಕಾಯ್ದು ನೋಡಬೇಕಿದೆ.