ದೇವಾಲಯಗಳ ಹುಂಡಿಗಳ ಮೇಲೆ ಈಗ ಮುಜರಾಯಿ ಇಲಾಖೆಯ ಕಣ್ಣು ಬಿದ್ದಿದೆ. ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿನ ಹಲವು ದೇವಾಲಯಗಳಲ್ಲಿ ಪೂಜಾರಿಗಳೇ ಹುಂಡಿ ನಿರ್ಮಿಸಿರುವ ಸಂಗತಿ ಬೆಳಕಿಗೆ ಬಂದಿದೆ. ಹೀಗಾಗಿ ಕಠಿಣ ನಿಯಮ ಜಾರಿಗೆ ಸರ್ಕಾರ ಮುಂದಾಗಿದೆ.
ಇಂತಹ ಅನಧಿಕೃತ ಹುಂಡಿಗಳಿಗೆ ಬ್ರೇಕ್ ಹಾಕಲು ಈಗ ಮುಜರಾಯಿ ಇಲಾಖೆ ಮುಂದಾಗಿದೆ. ದೇವಾಲಯದ ನಿಯಮ ಮೀರಿ ಹುಂಡಿ ಅಳವಡಿಸಿದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಹೆಚ್ಚುವರಿ ಹುಂಡಿಗಳನ್ನು ಪೂಜಾರಿಗಳು ನಿರ್ಮಿಸಿದ್ದರು. ಈ ಕುರಿತು ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಕುರಿತು ಕಡಿವಾಣ ಹಾಕಲು ಮುಂದಾಗಿದೆ.