ಯಾರಾದ್ರು ಹತ್ತು ರೂಪಾಯಿ ಕೊಟ್ಟರೆ ಅಂಗಡಿಗೆ ಹೋಗಿ ತಿಂಡಿ ತಿನ್ನೋ ಈ ಕಾಲದಲ್ಲಿ ಇಲ್ಲೊಬ್ಬ ಬಾಲಕ ತಾನು ಕೂಡಿಟ್ಟ ಹಣವನ್ನೇಲ್ಲಾ ನಮ್ಮ ಭಾರತೀಯ ಸೇನೆಗೆ ದಾನ ಮಾಡಿ ಮಾದರಿಯಾಗಿದ್ದಾನೆ.

ಹೌದು ತಮಿಳುನಾಡಿನ ಕರೂರ್ ಜಿಲ್ಲೆಯ 8 ವರ್ಷದ ಸಾಯಿ ಧನ್ವಿಶ್ ಎಂಬ ಬಾಲಕ ಸಂಬಂಧಿಕರು ಕೊಟ್ಟ ಹಣವನ್ನೆಲ್ಲಾ ಸೈಕಲ್ ಹಾಗೂ ಹೊಸ ಬಟ್ಟೆ ಖರೀದಿಸಲು, ಒಂದು ಹಳದಿ ಕಲರ್ ಡಬ್ಬದಲ್ಲಿ ಕೂಡಿಟ್ಟಿದ್ದ. ಇದೀಗ ಆ ಎಲ್ಲಾ ಹಣವನ್ನು ಸೇನೆಗೆ ನೀಡಬೇಕೆಂದು ತನ್ನ ಪೋಷಕರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಹಸ್ತಾಂತರಿಸಿದ್ದಾನೆ.
ಈ ಹಿಂದೆ ಧನ್ವಿಶ್ ವಯನಾಡು ಭೂಕುಸಿತ ಸಂತ್ರಸ್ತರಿಗೂ ಸಹಾಯ ಮಾಡಿದ್ದ ಎಂದು ಪೋಷಕರು ತಿಳಿಸಿದ್ದಾರೆ. ಈತನ ತಂದೆ ತಾಯಿ ಮೀನು ಮಾರಾಟಗಾರರಾಗಿದ್ದು, ಈತನಿಗೆ ಒಬ್ಬ ತಮ್ಮ ಕೂಡ ಇದ್ದಾನೆ.