ಬೈಂದೂರು: ಖ್ಯಾತ ಪ್ರವಾಸಿ ತಾಣ ತ್ರಾಸಿ ಬೀಚ್ ನಲ್ಲಿ ಪ್ರವಾಸಿಗರ ಹುಚ್ಚಾಟ, ಮೋಜು-ಮುಸ್ತಿ ಮುಂದುವರಿದಿದ್ದು, ಅಪಾಯಕ್ಕೆ ಸಿಲುಕಿದ್ದ ಹಲವರನ್ನು ರಕ್ಷಿಸಿರುವ ಘಟನೆ ನಡೆದಿದೆ.

ಮೋಜು-ಮಸ್ತಿಗಾಗಿ ಬಂದಿದ್ದ ಬೆಂಗಳೂರು ಮೂಲದ ಪ್ರವಾಸಿಗರು ಸಮುದ್ರದ ಅಬ್ಬರದ ಅಲೆಗೆ ಸಿಲುಕಿದ್ದರು. ಹೀಗೆ ಸುಲಿಕಿದ್ದ 6 ಜನರನ್ನು ಸುರೇಶ್ ಉಪ್ಪುಂದ ಹಾಗೂ ಗೋಪಾಲ್ ಕಾವ್ರಾಡಿ ಅವರು ಇಬ್ರಾಹಿಂ, ಗಂಗೋಳ್ಳಿ ಹಾಗೂ ಲೈಫ್ ಗಾರ್ಡ್ ಸಹಕಾರದಿಂದ ರಕ್ಷಿಸಿದ್ದಾರೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ಗಂಗೊಳ್ಳಿ ಪೊಲೀಸರು ಸುರಕ್ಷತೆ ದೃಷ್ಟಿಯಿಂದ ಪ್ರವಾಸಿಗರನ್ನು ಅಲರ್ಟ್ ಮಾಡಿದ್ದಾರೆ. ಆನಂತರ ಪ್ರವಾಸಿಗರಿಗೆ ತಿಳುವಳಿಕೆ ಮೂಡಿಸಲಾಯಿತು.