ಪಹಲ್ಗಾಮ್ ಹತ್ಯೆ ರುವಾರಿಗಳಿಗಾಗಿ ಭಾರತೀಯ ಸೇನೆಯ ರಣಬೇಟೆ ಮುಂದುವರಿದಿದೆ. ಶೋಪಿಯಾನ್ ಜಿಲ್ಲೆಯಲ್ಲಿ ಕೂಂಬಿಂಗ್ ನಡೆಸಿರೋ ಸೇನೆ ಅಡಗಿ ಕುಳಿತಿದ್ದ ಓರ್ವ ಉಗ್ರನನ್ನು ಖತಂ ಮಾಡಿದೆ. ಈ ನಡುವೆ ಜಿಲ್ಲೆಯಾದ್ಯಂತ ಪಹಲ್ಗಾಮ್ ನರಮೇಧ ಹಿಂದಿನ ಜಿಹಾದಿಗಳ ಪೋಸ್ಟರ್ ಗಳು ರಾರಾಜಿಸ್ತಿವೆ.

ಈ ಮೂವರು ಉಗ್ರರ ಸುಳಿವು ನೀಡಿದವರಿಗೆ 20 ಲಕ್ಷ ಬಹುಮಾನವನ್ನು ಘೋಷಿಸಲಾಗಿದೆ. ಭಯೋತ್ಪಾದನೆ ಮುಕ್ತ ಕಾಶ್ಮೀರ ಅನ್ನೋ ಅಡಿ ಬರಹದ ಈ ಪೋಸ್ಟರ್ ಗಳು ಕಣಿವೆ ರಾಜ್ಯದಲ್ಲಿ ರಾರಾಜಿಸ್ತಿವೆ. ಹತ್ಯೆಯಲ್ಲಿ ಭಾಗಿಯಾಗಿದ್ದ ಲಷ್ಕರ್ ಉಗ್ರ ಸಂಘಟನೆಯ ಆಸೀಫ್ ಫೌಜಿ, ಸುಲೇಮಾನ್ ಶಹಾ ಮತ್ತು ಅಬು ತಲ್ಹಾ ಬಗ್ಗೆ ಮಾಹಿತಿ ನೀಡಿದ್ರೆ 20 ಲಕ್ಷ ಬಹುಮಾನ ನೀಡುವುದಾಗಿ ಈ ಪೋಸ್ಟರ್ ಗಳಲ್ಲಿ ಉಲ್ಲೇಖಿಸಲಾಗಿದೆ. ಏಪ್ರಿಲ್ 22ರಂದು ಪಹಲ್ಗಾಮ್ ನಲ್ಲಿ ಅಟ್ಟಹಾಸ ಮೆರೆದಿದ್ದ ಈ ಮೂವರು 26 ಅಮಾಯಕ ಪ್ರವಾಸಿಗರ ನೆತ್ತರು ಹೀರಿದ್ರು.