ಆರ್ಸಿಬಿ ವಿಜಯೋತ್ಸ ಮತ್ತು ಯಾತ್ರೆಗೆ 15 ಕೋಟಿ ರೂ. ಖರ್ಚು ಮಾಡಿರುವ ಅಂಶ ಬಯಲಾಗಿದೆ. ಆರ್ಸಿಬಿ ಮಂಗಳವಾರ ಕಪ್ ಗೆಲ್ಲುತ್ತಿದ್ದಂತೆ ಬುಧವಾರ ವಿಧಾನಸೌಧ ಮತ್ತು ಸ್ಟೇಡಿಯಂ ಬಳಿ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದಕ್ಕಾಗಿ ಸುಮಾರು 15 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಮಾಜಿ ಮುಖ್ಯಮಂತ್ರಿಯೊಬ್ಬರ ಮೊಮ್ಮಕ್ಕಳ ಒಡೆತನ ಡಿಎನ್ಎ ಸಂಸ್ಥೆ ವಿಕ್ಟರಿ ಪರೇಡ್ ಜವಾಬ್ದಾರಿ ಹೊತ್ತುಕೊಂಡಿತ್ತು. ಆದರೆ ಕಾರ್ಯಕ್ರಮ ನಿಭಾಯಿಸುವಲ್ಲಿ ಡಿಎನ್ ಎ ಸಂಸ್ಥೆ ವಿಫಲವಾಗಿದ್ದು, ಆರ್ಸಿಬಿ ವಿಜಯಯಾತ್ರೆ ವೇಳೆ ಅಭಿಮಾನಿಗಳನ್ನು ನಿಭಾಯಿಸುವಲ್ಲಿ ಎಡವಿದೆ. ಸರ್ಕಾರದ ಪ್ರಭಾವಿ ಸಚಿವರೊಬ್ಬರ ಒತ್ತಡಕ್ಕೆ ಮಣಿದು ಬುಧವಾರವೇ ವಿಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿತ್ತು ಎನ್ನಲಾಗಿದೆ. ಆ ಮೂಲಕ ಡಿಎನ್ ಎ ಸಂಸ್ಥೆ ಬೇಜವಾಬ್ದಾರಿಯಿಂದಾಗಿ ಸ್ಟೇಡಿಯಂ ಬಳಿ ಕಾಲ್ತುಳಿತ ಸಂಭವಿಸಿ 11 ಜನ ಆರ್ಸಿಬಿ ಅಭಿಮಾನಿಗಳು ಮೃತಪಟ್ಟಿದ್ದರು.